‘ಕೆಪಿಎಸ್ಸಿ ನಡೆಸುವ ಎಲ್ಲಾ ನೇಮಕಾತಿಗಳನ್ನು ತ್ವರಿಗತಿಯಲ್ಲಿ ನಡೆಸಬೇಕು. ಮುಂಬರುವ ನೇಮಕಾತಿಗಳನ್ನು ಪೂರ್ವಯೋಜಿತ ವೇಳಾಪಟ್ಟಿಯೊಂದಿಗೆ ಆಯೋಜಿಸಬೇಕು. ಕೇಂದ್ರ ಲೋಕಸೇವಾ ಆಯೋಗ ಮಾದರಿಯ ಪರೀಕ್ಷಾ ಪ್ರಕ್ರಿಯೆಗಳ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ರಾಜ್ಯದಲ್ಲಿ ಖಾಲಿ ಇರುವ 2.44 ಲಕ್ಷ ಹುದ್ದೆಗಳಿಗೆ ಶೀಘ್ರ ಅಧಿಸೂಚನೆ ಹೊರಡಿಸಬೇಕು’ ಎಂದು ಆಗ್ರಹಿಸಿದರು.