ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಆರಂಭಕ್ಕೆ ಮುನ್ನ ಉಗ್ರಪ್ಪ ಅವರ ಬಳಿ ಬಂದು ಕುಳಿತು ಸಲೀಂ ಮಾತನಾಡಿದ್ದು, ಅದಕ್ಕೆ ಉಗ್ರಪ್ಪ ಪ್ರತಿಕ್ರಿಯಿಸಿದ್ದರು. ಇಬ್ಬರ ನಡುವಿನ ಸಂಭಾಷಣೆಯಲ್ಲಿ ಏನಿತ್ತು ಎಂಬುದರ ವಿವರ ಇಲ್ಲಿದೆ.
ಸಲೀಂ– ಜಾಸ್ತಿ ಉಪ್ಪಾರ್, ಜಿ. ಶಂಕರ್, ಹನುಮಂತಪ್ಪ. ಹನುಮಂತಪ್ಪ ಬಳ್ಳಾರಿಯವನು ಗೊತ್ತಾ ಸರ್... ಹನುಮಂತಪ್ಪ ಹೊಸಪೇಟೆ. ಇವನು ಉಪ್ಪಾರ್, ಬೆಂಗಳೂರು. ಜಿ. ಶಂಕರ್ ಉಡುಪಿ.
ಉಗ್ರಪ್ಪ: ಉಪ್ಪಾರ್ ಬಿಜಾಪುರ್
ಸಲೀಂ: ಬಿಜಾಪುರ್.. ಮತ್ತೆ ಅವನ ಮನೆ ಎಸ್.ಎಂ. ಕೃಷ್ಣ ಮನೆ ಎದುರುಗಡೆ
ಉಗ್ರಪ್ಪ: ಇದು ಇದೆಯಲ್ಲ...
ಸಲೀಂ: ದೊಡ್ಡ ಸ್ಕ್ಯಾಂಡಲ್... ಕೆದಕುತ್ತಾ ಹೋದರೆ ಇವರದ್ದೂ ಬರುತ್ತೆ.
ಉಗ್ರಪ್ಪ: ನಾನು ನಿಮಗೆ ಹೇಳಲಾ. ಕಣ್ಣು ಮುಚ್ಚಿ...
ಸಲೀಂ: ನಮ್ಮ ಮುಳಗುಂದ 50 ರಿಂದ 100 ಕೋಟಿ ಮಾಡಿದ್ದಾನೆ. ಮುಳಗುಂದ... ಅವನು 50, 100 ಮಾಡಿದ್ದಾನೆ ಅಂದ್ರೆ ಇವನ ಹತ್ರ ಎಷ್ಟು ಇರಬಹುದು. ಡಿಕೆ ಹತ್ರ. ಲೆಕ್ಕ ಹಾಕಿ. ಅವನು ಬರೀ ಕಲೆಕ್ಷನ್ ಗಿರಾಕಿ.