ಮಂಜುನಾಥ ಕುಮಾರ್ ಅವರನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಕಳೆದ ಒಂದು ವರ್ಷದಿಂದ ಎದ್ದಿತ್ತು. ಪಕ್ಷದ ಒಂದು ಗುಂಪಿನ ಸದಸ್ಯರು, ಕುಶಾಲನಗರ ಹಾಗೂ ಸೋಮವಾರಪೇಟೆಯಲ್ಲಿ, ರೆಸಾರ್ಟ್ವೊಂದರಲ್ಲಿ ಸಭೆ ನಡೆಸಿದ್ದರು. ವರಿಷ್ಠರಿಗೂ ಪತ್ರ ಬರೆದು ಮಂಜುನಾಥ್ ಅವರನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿದ್ದರು. ಸದ್ಯಕ್ಕೆ ಜಿಲ್ಲಾ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ವರಿಷ್ಠರು ಹೇಳಿದ್ದರು. ಅದಾದ ಮೇಲೆ ಸಭೆ ನಡೆಸಿದ್ದ ಮುಖಂಡರು ಸುಮ್ಮನಿದ್ದರು. ಇದೀಗ ಮಂಜುನಾಥ್ ಅವರೇ ರಾಜೀನಾಮೆ ನೀಡಿದ್ದಾರೆ.