ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಭೇಟಿಯ ವೇಳೆಯಲ್ಲೇ ಶುಕ್ರವಾರ ಇಡೀ ದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆಗಳ ಸುರಿಮಳೆಗರೆದ ಕೆಪಿಸಿಸಿ, ಕರ್ನಾಟಕದ ಜನರಿಗೆ ಬಿಜೆಪಿ ನೀಡಿದ್ದ ಭರವಸೆಗಳು, ಸರಕು ಮತ್ತು ಸೇವಾ ತೆರಿಗೆಯ ಪಾಲು ಬಿಡುಗಡೆ, ರಾಜ್ಯ ಸರ್ಕಾರದ ವಿರುದ್ಧದ ಶೇಕಡ 40ರ ಕಮಿಷನ್ ಆರೋಪ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತು.