’ಸ್ನೇಹಾ ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ. ನನ್ನ ತಂದೆ ಮುನಿಯಪ್ಪ ಮತ್ತು ತಾಯಿ ನಾರಾಯಣಮ್ಮ ಕಷ್ಟದಲ್ಲಿ ಕೈತೊಳೆಯುತ್ತಿದ್ದಾರೆ. ಅಕ್ಕನ ಸಾವಿನ ಆಘಾತದಿಂದ ನಾವು ಯಾರೂ ಇನ್ನೂ ಹೊರಬಂದಿಲ್ಲ. ಇನ್ನು ಈ ಮಗುವಿನ ಮನಸ್ಸಿಗೆ ಆದ ಗಾಯವನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. ಹೊಸಕೋಟೆ ಬಳಿ ನಾನು ಗಂಡನ ಜತೆ ಮನೆ ಮಾಡಿಕೊಂಡಿದ್ದೇನೆ. ಅಲ್ಲಿಗೆ ಸ್ನೇಹಾಳನ್ನು ಕರೆದುಕೊಂಡು ಹೋಗಬೇಕು ಎಂದಿದ್ದೇನೆ‘ ಎನ್ನುತ್ತಾರೆ ಮಗುವಿನ ಚಿಕ್ಕಮ್ಮ ನಂದಿನಿ.