ತುಮಕೂರು (ಶೇ 33.57), ಮಂಡ್ಯ (ಶೇ 31.53), ಹಾಸನ (ಶೇ 30.36) ಬೆಂಗಳೂರು ನಗರ (ಶೇ 25.81) ಹಾಗೂ ಬಳ್ಳಾರಿಯಲ್ಲಿ (ಶೇ 23.42) ಹೆಚ್ಚಿನ ಪ್ರಮಾಣದಲ್ಲಿ ಸೋಂಕು ದೃಢಪಡುತ್ತಿದೆ. ಹಾವೇರಿ (ಶೇ 6.58), ಯಾದಗಿರಿ (ಶೇ 6.65), ವಿಜಯಪುರ (ಶೇ 9.27) ಹಾಗೂ ದಕ್ಷಿಣ ಕನ್ನಡ (ಶೇ 9.76) ಜಿಲ್ಲೆಯಲ್ಲಿ ದೃಢ ಪ್ರಮಾಣ ಕಡಿಮೆಯಿದೆ. ರಾಜ್ಯದಲ್ಲಿ ಈ ತಿಂಗಳ ಮೊದಲ ವಾರ ಹೊಸ ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿಯ ಆಸುಪಾಸಿನಲ್ಲಿತ್ತು. ಸೋಂಕು ದೃಢ ಪ್ರಮಾಣ ಶೇ 5ರೊಳಗಿತ್ತು. ಈಗ ನಿತ್ಯದ ಪ್ರಕರಣಗಳ ಸಂಖ್ಯೆ 50 ಸಾವಿರದವರೆಗೂ ಏರಿಕೆ ಕಂಡಿದೆ. ದೃಢ ಪ್ರಮಾಣವೂ ಶೇ 30ರ ಗಡಿ ದಾಟಿದೆ.