ಈ ಕುರಿತು ಜಂಟಿ ಹೇಳಿಕೆ ನೀಡಿರುವ ಜನಾಗ್ರಹದ ಸಸಿಕಾಂತ್ ಸೆಂಥಿಲ್, ಎಚ್.ಆರ್. ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್, ಮಾವಳ್ಳಿ ಶಂಕರ್, ಕೆ.ಎಲ್. ಅಶೋಕ್, ಸ್ವರ್ಣಾ ಭಟ್, ಯಾಸೀನ್ ಮಲ್ಪೆ, ಯೂಸೂಫ್ ಕನ್ನಿ, ಡಾ.ಸಿದ್ದನಗೌಡ ಪಾಟೀಲ ಮತ್ತು ನೂರ್ ಶ್ರೀಧರ್, ‘ಗ್ರಾಮೀಣ ಕೂಲಿ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರು, ಆದಿವಾಸಿಗಳು ಮತ್ತು ಅಲೆಮಾರಿ ಜನರನ್ನು ಪ್ಯಾಕೇಜ್ನಲ್ಲಿ ಪರಿಗಣಿಸಿಯೇ ಇಲ್ಲ’ ಎಂದು ದೂರಿದ್ದಾರೆ.