‘ಸರ್ಕಾರದ ನಿರ್ದೇಶನವನ್ನು ಮೀರಿ ಆಸ್ಪತ್ರೆಯು ನನ್ನಿಂದ ಶುಲ್ಕ ಪಡೆದ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ, ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೆ. ಈ ಬಗ್ಗೆ ಪ್ರತಿಭಟನೆಯನ್ನೂ ಮಾಡಿದ್ದೇನೆ. ನನ್ನ ಹೋರಾಟಕ್ಕೆ ಮಣಿದು ಅವರು ₹ 10ಸಾವಿರ ಮರಳಿಸಲು ಬಂದರು. ಶುಲ್ಕ ಪಡೆದಿದ್ದಕ್ಕೆ ಕ್ಷಮೆ ಯಾಚಿಸಬೇಕು ಹಾಗೂ ನನಗೆ ಮಾನಸಿಕ ಕಿರುಕುಳ ನೀಡಿದ್ದಕ್ಕೆ ₹ 1 ದಂಡ ಸೇರಿಸಿ ನೀಡಬೇಕು ಎಂದು ಷರತ್ತು ಹಾಕಿದ ಬಳಿಕ ₹ 10,001 ಅನ್ನು ನನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ’ ಎಂದು ಅವರು ಹೇಳಿದರು.