<p><strong>ಬೆಂಗಳೂರು:</strong> ಕೋವಿಡ್–19 ನಿಂದಾಗಿ ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪಂಗಡಗಳಿಗೆ (ಎಸ್.ಟಿ) ಮೀಸಲಾದ ವಿಶೇಷ ಅನುದಾನದ (ಎಸ್ಸಿಎಸ್ಪಿ/ಟಿಎಸ್ಪಿ) ಬಳಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಒಟ್ಟು ಶೇ 20 ರಷ್ಟು ಮಾತ್ರ ಖರ್ಚಾಗಿದೆ.</p>.<p>ಎಸ್ಸಿಎಸ್ಪಿ/ಟಿಎಸ್ಪಿ ಅಡಿ 2020–21 ರ ಸಾಲಿಗೆ ₹27,699 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ, ಈ ವರೆಗೆ ₹5,603 ಕೋಟಿ ಮಾತ್ರ ಬಳಕೆಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.</p>.<p>ಈವರೆಗೆ ಸಮಾಜಕಲ್ಯಾಣ ಇಲಾಖೆಯನ್ನು ನಿರ್ವಹಿಸಿದ ಕಾರಜೋಳ ಅವರು ಒಂದು ವರ್ಷದ ಸಾಧನೆಯನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.</p>.<p>ಕೋವಿಡ್ನಿಂದಾಗಿ ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿನಿಲಯಗಳು ಆರಂಭಗೊಂಡಿಲ್ಲ. ಲಾಕ್ಡೌನ್ ಇದ್ದ ಕಾರಣ ಇಲಾಖೆಯ ಹಲವು ಚಟುವಟಿಕೆಗಳೂ ನಡೆಯಲಿಲ್ಲ. ಇದರಿಂದ ಹಣ ಖರ್ಚಾಗಿಲ್ಲ ಎಂದು ತಿಳಿಸಿದರು.</p>.<p>2019–20ರಲ್ಲಿ ₹27,558 ಕೋಟಿಯಲ್ಲಿ ₹25,387 ಕೋಟಿ ಬಳಕೆ ಮಾಡಿ ಶೇ 92 ರಷ್ಟು ಪ್ರಗತಿ ಸಾಧಿಸಲಾಗಿತ್ತು. ಎಸ್.ಸಿಗೆ ₹18,228 ಕೋಟಿ, ಎಸ್.ಟಿಗೆ ₹7,159 ಕೋಟಿ ಮೀಸಲಿಡಲಾಗಿತ್ತು ಎಂದು ಹೇಳಿದರು.</p>.<p>ಭೂ ಒಡೆತನ ಯೋಜನೆಯಡಿ 2,391 ಎಸ್.ಸಿ ಮತ್ತು ಎಸ್.ಟಿ ಫಲಾನು<br />ಭವಿಗಳಿಗೆ 3,228 ಎಕರೆಯನ್ನು ₹295 ಕೋಟಿ ವೆಚ್ಚದಲ್ಲಿ ಖರೀದಿಸಿ ಹಂಚಿಕೆ ಮಾಡ<br />ಲಾಗಿದೆ. 2020–21ನೇ ಸಾಲಿನಲ್ಲಿ ₹349.11 ಕೋಟಿ ನಿಗದಿ ಮಾಡಿದ್ದು, 1,151 ಫಲಾನುಭವಿಗಳಿಗೆ ₹141 ಕೋಟಿ ವೆಚ್ಚದಲ್ಲಿ 1,603.43 ಎಕರೆ ಖರೀದಿಸಿ ವಿತರಿಸಲಾಗಿದೆ ಎಂದರು.</p>.<p>ಎಸ್.ಸಿ 1,69,374 ಹಾಗೂ ಎಸ್.ಟಿಗೆ ಸೇರಿದ 36,548 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದೆ. 9.11 ಲಕ್ಷ ಎಸ್.ಸಿ ವಿದ್ಯಾರ್ಥಿಗಳಿಗೆ ₹134 ಕೋಟಿ ಹಾಗೂ 3.99 ಲಕ್ಷ ಎಸ್.ಟಿ ವಿದ್ಯಾರ್ಥಿಗಳಿಗೆ ₹51.97 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಸ್.ಸಿಯ 1,10,985 ಹಾಗೂ ಎಸ್.ಟಿಯ 40,378 ವಿದ್ಯಾರ್ಥಿಗಳಿಗೆ ₹267 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.</p>.<p>‘ಯಡಿಯೂರಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಶ್ರೀರಾಮುಲು ಅವರಿಗೆವಹಿಸಿಕೊಟ್ಟಿದ್ದಾರೆ. ಅವರಿಗೆ ಸಹಕಾರ ನೀಡುವ ಮೂಲಕ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.</p>.<p>***</p>.<p>ಸಾಮಾಜಿಕ ನ್ಯಾಯ, ಶೋಷಿತರ ಕಲ್ಯಾಣಕ್ಕಾಗಿ, ಬಡವರ ಮಕ್ಕಳ ಏಳಿಗೆಗೆ ಹಲವು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದ ತೃಪ್ತಿ ಇದೆ</p>.<p><strong>- ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೋವಿಡ್–19 ನಿಂದಾಗಿ ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪಂಗಡಗಳಿಗೆ (ಎಸ್.ಟಿ) ಮೀಸಲಾದ ವಿಶೇಷ ಅನುದಾನದ (ಎಸ್ಸಿಎಸ್ಪಿ/ಟಿಎಸ್ಪಿ) ಬಳಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಒಟ್ಟು ಶೇ 20 ರಷ್ಟು ಮಾತ್ರ ಖರ್ಚಾಗಿದೆ.</p>.<p>ಎಸ್ಸಿಎಸ್ಪಿ/ಟಿಎಸ್ಪಿ ಅಡಿ 2020–21 ರ ಸಾಲಿಗೆ ₹27,699 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ, ಈ ವರೆಗೆ ₹5,603 ಕೋಟಿ ಮಾತ್ರ ಬಳಕೆಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.</p>.<p>ಈವರೆಗೆ ಸಮಾಜಕಲ್ಯಾಣ ಇಲಾಖೆಯನ್ನು ನಿರ್ವಹಿಸಿದ ಕಾರಜೋಳ ಅವರು ಒಂದು ವರ್ಷದ ಸಾಧನೆಯನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.</p>.<p>ಕೋವಿಡ್ನಿಂದಾಗಿ ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿನಿಲಯಗಳು ಆರಂಭಗೊಂಡಿಲ್ಲ. ಲಾಕ್ಡೌನ್ ಇದ್ದ ಕಾರಣ ಇಲಾಖೆಯ ಹಲವು ಚಟುವಟಿಕೆಗಳೂ ನಡೆಯಲಿಲ್ಲ. ಇದರಿಂದ ಹಣ ಖರ್ಚಾಗಿಲ್ಲ ಎಂದು ತಿಳಿಸಿದರು.</p>.<p>2019–20ರಲ್ಲಿ ₹27,558 ಕೋಟಿಯಲ್ಲಿ ₹25,387 ಕೋಟಿ ಬಳಕೆ ಮಾಡಿ ಶೇ 92 ರಷ್ಟು ಪ್ರಗತಿ ಸಾಧಿಸಲಾಗಿತ್ತು. ಎಸ್.ಸಿಗೆ ₹18,228 ಕೋಟಿ, ಎಸ್.ಟಿಗೆ ₹7,159 ಕೋಟಿ ಮೀಸಲಿಡಲಾಗಿತ್ತು ಎಂದು ಹೇಳಿದರು.</p>.<p>ಭೂ ಒಡೆತನ ಯೋಜನೆಯಡಿ 2,391 ಎಸ್.ಸಿ ಮತ್ತು ಎಸ್.ಟಿ ಫಲಾನು<br />ಭವಿಗಳಿಗೆ 3,228 ಎಕರೆಯನ್ನು ₹295 ಕೋಟಿ ವೆಚ್ಚದಲ್ಲಿ ಖರೀದಿಸಿ ಹಂಚಿಕೆ ಮಾಡ<br />ಲಾಗಿದೆ. 2020–21ನೇ ಸಾಲಿನಲ್ಲಿ ₹349.11 ಕೋಟಿ ನಿಗದಿ ಮಾಡಿದ್ದು, 1,151 ಫಲಾನುಭವಿಗಳಿಗೆ ₹141 ಕೋಟಿ ವೆಚ್ಚದಲ್ಲಿ 1,603.43 ಎಕರೆ ಖರೀದಿಸಿ ವಿತರಿಸಲಾಗಿದೆ ಎಂದರು.</p>.<p>ಎಸ್.ಸಿ 1,69,374 ಹಾಗೂ ಎಸ್.ಟಿಗೆ ಸೇರಿದ 36,548 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದೆ. 9.11 ಲಕ್ಷ ಎಸ್.ಸಿ ವಿದ್ಯಾರ್ಥಿಗಳಿಗೆ ₹134 ಕೋಟಿ ಹಾಗೂ 3.99 ಲಕ್ಷ ಎಸ್.ಟಿ ವಿದ್ಯಾರ್ಥಿಗಳಿಗೆ ₹51.97 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಸ್.ಸಿಯ 1,10,985 ಹಾಗೂ ಎಸ್.ಟಿಯ 40,378 ವಿದ್ಯಾರ್ಥಿಗಳಿಗೆ ₹267 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.</p>.<p>‘ಯಡಿಯೂರಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಶ್ರೀರಾಮುಲು ಅವರಿಗೆವಹಿಸಿಕೊಟ್ಟಿದ್ದಾರೆ. ಅವರಿಗೆ ಸಹಕಾರ ನೀಡುವ ಮೂಲಕ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.</p>.<p>***</p>.<p>ಸಾಮಾಜಿಕ ನ್ಯಾಯ, ಶೋಷಿತರ ಕಲ್ಯಾಣಕ್ಕಾಗಿ, ಬಡವರ ಮಕ್ಕಳ ಏಳಿಗೆಗೆ ಹಲವು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದ ತೃಪ್ತಿ ಇದೆ</p>.<p><strong>- ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>