<p><strong>ತುಮಕೂರು: </strong>ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿರುವ ಬೆಂಗಳೂರು ವಿಭಾಗ ಮಟ್ಟದ ಸಮಾವೇಶಕ್ಕೆ ನಗರದ ಸಿದ್ಧಗಂಗಾ ಮಠದ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.</p>.<p>ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿಗೆ ಬೇಡಿಕೆ ಸಲ್ಲಿಸುವ ಮತ್ತುಸಮುದಾಯ ಒಗ್ಗೂಡುವಿಕೆ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು. ಎರಡು ದಿನದ ಸಮಾವೇಶಕ್ಕೆ ಭಾನುವಾರ ತೆರೆ ಬೀಳಲಿದೆ.</p>.<p>ಬೆಂಗಳೂರು ವಿಭಾಗದ ಒಂಬತ್ತು ಜಿಲ್ಲೆಗಳ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು, ಪ್ರಮುಖರು ಭಾಗವಹಿಸಿದ್ದ ಸಮಾವೇಶದಲ್ಲಿ ವೀರಶೈವ ಹಾಗೂ ಲಿಂಗಾಯತರು ಪ್ರತ್ಯೇಕವಲ್ಲ. ಪ್ರತ್ಯೇಕ ಹೆಸರಿನಿಂದ ಕರೆದರೂ ಇವೆರಡೂ ಒಂದೇ ಸಮುದಾಯ ಎಂದು ಪ್ರತಿಪಾದಿಸಲಾಯಿತು.</p>.<p>ವೀರಶೈವ– ಲಿಂಗಾಯತರ ಇತರ ಉಪಪಂಗಡಗಳು ಭೇದ ಎಣಿಸದೆ ಮಹಾಸಭಾದ ಅಡಿಯಲ್ಲೇ ಒಗ್ಗೂಡಬೇಕು. ಒಳಪಂಗಡಗಳ ಹೆಸರಿನಲ್ಲಿ ಸಮುದಾಯದ ನಡುವೆ ತಾರತಮ್ಯ, ಭಿನ್ನಾಭಿಪ್ರಾಯ ತರಬಾರದು. ‘ನಾವೆಲ್ಲರೂ ಒಂದೇ’ ಎಂಬ ಭಾವನೆಯಿಂದ ಸಂಘಟಿತರಾಗುವಂತೆ ಕರೆ ನೀಡಲಾಯಿತು.</p>.<p>ಲಿಂಗಾಯತ ಹಾಗೂ ವೀರಶೈವರು ಬೇರೆ ಎಂದು ಕೆಲವರು ಪ್ರತ್ಯೇಕಿಸಲು ನೋಡುತ್ತಿದ್ದಾರೆ. ಕೆಲವರು ಲಿಂಗ ಪೂಜಿಸಿದರೆ, ಮತ್ತೆ ಕೆಲವರು ಶಿವನನ್ನು ಆರಾಧಿಸುತ್ತಾರೆ. ಪೂಜೆಯಲ್ಲಿ ವ್ಯತ್ಯಾಸ ಕಾಣಬಹುದೇ ಹೊರತು ಸಮುದಾಯದ ನಡುವೆ ಭಿನ್ನತೆ ಇಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಒಗ್ಗೂಡುವ ಅಗತ್ಯವಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.</p>.<p>ವೀರಶೈವ ಲಿಂಗಾಯತರ ಹಲವು ಉಪಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿಲ್ಲ. ಇದರಿಂದಾಗಿ ಉದ್ಯೋಗ ಹಾಗೂ ಶಿಕ್ಷಣದಿಂದ ಸಮುದಾಯದ ಮಕ್ಕಳು ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಲಾಯಿತು.</p>.<p>ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಮಹಾಸಭಾ ಮುಖಂಡರಾದ ಎನ್.ತಿಪ್ಪಣ್ಣ, ಈಶ್ವರ ಖಂಡ್ರೆ, ನಟರಾಜ್ ಸಾಗರನಹಳ್ಳಿ, ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಅರುಣಾದೇವಿ ಮೊದಲಾದವರು ಭಾಗವಹಿಸಿದ್ದರು.</p>.<p>ವಾಣಿಜ್ಯ– ಕೈಗಾರಿಕೆ, ಕೃಷಿ ಕ್ಷೇತ್ರದ ಸವಾಲುಗಳು– ಪರಿಹಾರೋಪಾಯಗಳು, ಶಿಕ್ಷಣ ಮತ್ತು ಉದ್ಯಮದಲ್ಲಿ ಯುವಕರ ಪಾತ್ರ, ವೀರಶೈವ– ಲಿಂಗಾಯತ ಧರ್ಮ ಮತ್ತು ತತ್ವಾಚರಣೆಗಳು ಕುರಿತು ಗೋಷ್ಠಿಗಳು ನಡೆದವು. ಎರಡು ದಿನ ಸಾಕಷ್ಟು ಚರ್ಚೆಗಳು<br />ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿರುವ ಬೆಂಗಳೂರು ವಿಭಾಗ ಮಟ್ಟದ ಸಮಾವೇಶಕ್ಕೆ ನಗರದ ಸಿದ್ಧಗಂಗಾ ಮಠದ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.</p>.<p>ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿಗೆ ಬೇಡಿಕೆ ಸಲ್ಲಿಸುವ ಮತ್ತುಸಮುದಾಯ ಒಗ್ಗೂಡುವಿಕೆ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು. ಎರಡು ದಿನದ ಸಮಾವೇಶಕ್ಕೆ ಭಾನುವಾರ ತೆರೆ ಬೀಳಲಿದೆ.</p>.<p>ಬೆಂಗಳೂರು ವಿಭಾಗದ ಒಂಬತ್ತು ಜಿಲ್ಲೆಗಳ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು, ಪ್ರಮುಖರು ಭಾಗವಹಿಸಿದ್ದ ಸಮಾವೇಶದಲ್ಲಿ ವೀರಶೈವ ಹಾಗೂ ಲಿಂಗಾಯತರು ಪ್ರತ್ಯೇಕವಲ್ಲ. ಪ್ರತ್ಯೇಕ ಹೆಸರಿನಿಂದ ಕರೆದರೂ ಇವೆರಡೂ ಒಂದೇ ಸಮುದಾಯ ಎಂದು ಪ್ರತಿಪಾದಿಸಲಾಯಿತು.</p>.<p>ವೀರಶೈವ– ಲಿಂಗಾಯತರ ಇತರ ಉಪಪಂಗಡಗಳು ಭೇದ ಎಣಿಸದೆ ಮಹಾಸಭಾದ ಅಡಿಯಲ್ಲೇ ಒಗ್ಗೂಡಬೇಕು. ಒಳಪಂಗಡಗಳ ಹೆಸರಿನಲ್ಲಿ ಸಮುದಾಯದ ನಡುವೆ ತಾರತಮ್ಯ, ಭಿನ್ನಾಭಿಪ್ರಾಯ ತರಬಾರದು. ‘ನಾವೆಲ್ಲರೂ ಒಂದೇ’ ಎಂಬ ಭಾವನೆಯಿಂದ ಸಂಘಟಿತರಾಗುವಂತೆ ಕರೆ ನೀಡಲಾಯಿತು.</p>.<p>ಲಿಂಗಾಯತ ಹಾಗೂ ವೀರಶೈವರು ಬೇರೆ ಎಂದು ಕೆಲವರು ಪ್ರತ್ಯೇಕಿಸಲು ನೋಡುತ್ತಿದ್ದಾರೆ. ಕೆಲವರು ಲಿಂಗ ಪೂಜಿಸಿದರೆ, ಮತ್ತೆ ಕೆಲವರು ಶಿವನನ್ನು ಆರಾಧಿಸುತ್ತಾರೆ. ಪೂಜೆಯಲ್ಲಿ ವ್ಯತ್ಯಾಸ ಕಾಣಬಹುದೇ ಹೊರತು ಸಮುದಾಯದ ನಡುವೆ ಭಿನ್ನತೆ ಇಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಒಗ್ಗೂಡುವ ಅಗತ್ಯವಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.</p>.<p>ವೀರಶೈವ ಲಿಂಗಾಯತರ ಹಲವು ಉಪಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿಲ್ಲ. ಇದರಿಂದಾಗಿ ಉದ್ಯೋಗ ಹಾಗೂ ಶಿಕ್ಷಣದಿಂದ ಸಮುದಾಯದ ಮಕ್ಕಳು ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಲಾಯಿತು.</p>.<p>ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಮಹಾಸಭಾ ಮುಖಂಡರಾದ ಎನ್.ತಿಪ್ಪಣ್ಣ, ಈಶ್ವರ ಖಂಡ್ರೆ, ನಟರಾಜ್ ಸಾಗರನಹಳ್ಳಿ, ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಅರುಣಾದೇವಿ ಮೊದಲಾದವರು ಭಾಗವಹಿಸಿದ್ದರು.</p>.<p>ವಾಣಿಜ್ಯ– ಕೈಗಾರಿಕೆ, ಕೃಷಿ ಕ್ಷೇತ್ರದ ಸವಾಲುಗಳು– ಪರಿಹಾರೋಪಾಯಗಳು, ಶಿಕ್ಷಣ ಮತ್ತು ಉದ್ಯಮದಲ್ಲಿ ಯುವಕರ ಪಾತ್ರ, ವೀರಶೈವ– ಲಿಂಗಾಯತ ಧರ್ಮ ಮತ್ತು ತತ್ವಾಚರಣೆಗಳು ಕುರಿತು ಗೋಷ್ಠಿಗಳು ನಡೆದವು. ಎರಡು ದಿನ ಸಾಕಷ್ಟು ಚರ್ಚೆಗಳು<br />ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>