ಬೆಂಗಳೂರು: ಪಿತೃ ವಿಯೋಗಕ್ಕೆ ಒಳಗಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಜೆ ಸಾಂತ್ವನ ಹೇಳಿದರು.
ಡಿ.ಕೆ. ಶಿವಕುಮಾರ್ ಅವರು ಗೋವಾದಲ್ಲಿ ಚುನಾವಣೆ ಪ್ರಚಾರ ಮುಗಿಸಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಿ.ಟಿ. ರವಿ ಅವರು ಎದುರಾದರು.
ಶಾಸಕ ಸಿ.ಟಿ.ರವಿ ಅವರ ತಂದೆ ಸಿ.ಇ.ತಿಮ್ಮೇಗೌಡ (92) ಬೆಂಗಳೂರಿನಲ್ಲಿ ಶನಿವಾರ ನಿಧನರಾದರು. ತಿಮ್ಮೇಗೌಡ ಅವರು ಚಿಕ್ಕಮಾಗರವಳ್ಳಿಯವರು. ಅವರು ಕೃಷಿಕರು.
ಆಲ್ದೂರು ಸಮೀಪದ ತೋಟದಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.