ಬೆಂಗಳೂರು: ‘ದೇಶದ ಆರ್ಥಿಕತೆಯನ್ನು ನರೇಂದ್ರ ಮೋದಿ ಸರ್ಕಾರ ಇನ್ನಷ್ಟು ಪ್ರಪಾತಕ್ಕೆ ತಳ್ಳಿರುವುದು ಅಂಕಿಅಂಶ ಸಮೇತವಾಗಿ ರುಜುವಾತಾಗಿದೆ’ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ತಮ್ಮ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ದೇವರ ಆಟ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.ದೇಶದ ಜಿಡಿಪಿ ಶೇಕಡ 29.ರಷ್ಟು ಋಣಾತ್ಮಕ ಕುಸಿತಕಂಡಿದ್ದು, ಇದು ಸಾರ್ವಕಾಲಿಕ ಕುಸಿತ ಎಂದೇ ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ’ ಎಂದಿದ್ದಾರೆ.
‘ಹೀಗಿದ್ದರೂ, ದೇಶದಲ್ಲಿ ಎಲ್ಲವು ಸರಿ ಇದೆ ಎಂಬಂತೆ ಬಿಂಬಿಸುತ್ತಾ ಕೇವಲ ಚಪ್ಪಾಳೆ ಹೊಡೆದು ದೀಪ ಹಚ್ಚಿ ಭಾವನಾತ್ಮಕ ವಿಷಯಗಳನ್ನೇ ಮುಂದಿಟ್ಟು ಇನ್ನೆಷ್ಟು ದಿನ ಜನರನ್ನು ಕತ್ತಲಲ್ಲಿಡುತ್ತಿರಿ ಪ್ರಧಾನಿಗಳೇ. ಉತ್ತರಿಸಿ’ ಎಂದೂ ಖಂಡ್ರೆ ಕೆಣಕಿದ್ದಾರೆ.
ಇದು ಸಾರ್ವಕಾಲಿಕ ಕುಸಿತ ಎಂದೇ ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಿದ್ದು ದೇಶದಲ್ಲಿ ಎಲ್ಲವು ಸರಿ ಇದೆ ಎಂಬಂತೆ ಬಿಂಬಿಸುತ್ತಾ ಕೇವಲ ಚಪ್ಪಾಳೆ ಹೊಡೆದು ದೀಪ ಹಚ್ಚಿ ಭಾವನಾತ್ಮಕ ವಿಷಯಗಳನ್ನೇ ಮುಂದಿಟ್ಟು ಇನ್ನೆಷ್ಟು ದಿನ ಜನರನ್ನ ಕತ್ತಲಲ್ಲಿಡುತ್ತಿರಿ ಪ್ರಧಾನಿಗಳೇ..?? ಉತ್ತರಿಸಿ...(2/2)@PMOIndia@nsitharaman@KPCCPresident