ಇನ್ನು ಬ್ರಹ್ಮಗಿರಿಯಲ್ಲಿ ಮೂರನೇ ದಿನ ಕಾರ್ಯಾಚರಣೆ ಸಾಗುತ್ತಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸರೊಂದಿಗೆ ಅಗ್ನಿ ಶಾಮಕ ದಳ ಸಿಬ್ಬಂದಿಯನ್ನೂ ಕಾರ್ಯಾಚರಣೆಗೆ ಕರೆಸಿಕೊಳ್ಳಲಾಗಿದೆ. ಆನಂದ ತೀರ್ಥ ಅವರು ಶವವಾಗಿ ಪತ್ತೆಯಾದ ಸ್ಥಳದ ಸುತ್ತಲೂ ಮಣ್ಣ ತೆರವು ಮಾಡಲಾಗಿದೆ. ಬಟ್ಟೆ, ಪೂಜಾ ಸಾಮಗ್ರಿ, ನಾರಾಯಣ ಆಚಾರ್ ಅವರು ಓದುತ್ತಿದ್ದ ಪುಸ್ತಕಗಳು ಮಾತ್ರ ಸಿಕ್ಕಿವೆ. ಸ್ಥಳದಲ್ಲಿ ಸಮಾಧಿ ನಿರ್ಣಯ ಎಂಬ ಪುಸ್ತಕ ಸಿಕ್ಕಿದೆ. ನಾರಾಯಣ ಆಚಾರ್ ಈ ಕೃತಿಯನ್ನು ಓದುತ್ತಿದ್ದರೆ ಎಂದು ಪ್ರಶ್ನೆ ಮೂಡಿದೆ.