‘ಜನಾಶೀರ್ವಾದ ಯಾತ್ರೆ ಸ್ವಾಗತಿಸುವ ಸಮಯದಲ್ಲಿ ಸಿಂಗಲ್ ಬ್ಯಾರಲ್ ಬಂದೂಕಿನಲ್ಲಿ ಮದ್ದು ತುಂಬಿ ಕೆಲವರು ಹಾರಿಸಿದ್ದಾರೆ. ಆದರೆ, ಅವುಗಳಲ್ಲಿ ಗುಂಡು ಬಳಸಿಲ್ಲ.ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಯರಗೋಳ ಗ್ರಾಮದ ಶರಣಪ್ಪ ಗುಂಡಪ್ಪ ಭೀಮಳ್ಳಿ, ಮೋನಪ್ಪ ದುರ್ಗಪ್ಪ ಮಾನೆಗಾರ, ನಿಂಗಪ್ಪ ಚಂದಪ್ಪ ಹತ್ತಿಕುಣಿ, ದೇವಿಂದ್ರ ಹಣಮಂತ ಎಂಬವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.