ಸಿಡಿಲು ಬಡಿದು ಹಸು, ಎಮ್ಮೆ ಸಾವು: ದಾವಣಗೆರೆ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ವಿಜಯನಗರ ಜಿಲ್ಲೆಯ ಅರಸೀಕೆರೆ ಹೋಬಳಿಯ ಪುಣಭಘಟ್ಟ ಗ್ರಾಮದಲ್ಲಿ ಪ್ರಭು ಅವರಿಗೆ ಸೇರಿದ ಎಮ್ಮೆಗೆ ಸಿಡಿಲು ಬಡಿದು ಮೃತಪಟ್ಟಿದೆ. ಡಗ್ಗಿನ ಬಸಾಪುರ ಗ್ರಾಮದ ಹೊನ್ನಕ್ಕ ಅವರಿಗೆ ಸೇರಿದ ಹಸು ಸಿಡಿಲಿಗೆ ಬಲಿಯಾಗಿದೆ.