ಇದನ್ನು ಒಪ್ಪದ ನ್ಯಾಯಪೀಠ ಗಾಂಧೀಜಿಯವರ ಸೂಕ್ತಿಯೊಂದನ್ನು ಉದಾಹರಿಸಿ, ‘ಉದ್ದೇಶವಷ್ಟೇ ಅಲ್ಲ, ಮಾರ್ಗವೂ ಶುದ್ಧವಾಗಿರಬೇಕು’ ಎಂದು ಹೇಳಿ, ‘ಅರ್ಜಿದಾರರು ಶುದ್ಧಹಸ್ತದಿಂದ ನ್ಯಾಯಾಲಯದ ಮೆಟ್ಟಿಲೇರಿಲ್ಲ. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೋರ್ಟ್ ಮುಂದೆ ಬಹಿರಂಗಪಡಿಸಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿತು.