‘ನಗರದ ಬೈಪಾಸ್ ರಸ್ತೆಯ ಬಳಿಯ ಕೋಗಿಲಹಳ್ಳಿ ಬಳಿ ಬಸವನತ್ತದಲ್ಲಿ ಮನೆ ನೋಡಿದ್ದೇವೆ. ಒಂದು ಮಹಡಿಯ ಮನೆ ಇದಾಗಿದ್ದು, ಸಿದ್ದರಾಮಯ್ಯ ಅವರ ಸಿಬ್ಬಂದಿ ವೀಕ್ಷಿಸಿದ್ದಾರೆ. ಅವರ ಒಪ್ಪಿಗೆ ಸಿಗಬೇಕಿದೆ. ಇದು ವಾಸ್ತವ್ಯಕ್ಕೆ ಮಾತ್ರ; ಕಚೇರಿಯನ್ನು ಬೇರೆ ಕಡೆ ನೋಡಲಿದ್ದೇವೆ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.