ಬೆಂಬಿಡದೆ ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತಿದ್ದು, ಕಡಕೋಳ ಗ್ರಾಮದ ಮಾಂತೇಶ ನಾದಿಗಟ್ಟಿ ಎಂಬುವವರ ನೆಲಮಹಡಿಯಲ್ಲಿ ನೀರಿನ ಸೆಲೆ ಉಂಟಾಗಿ ನೀರು ಸತತವಾಗಿ ಹರಿಯುತ್ತಿದೆ. ಇದರಿಂದ ಪೂರ್ತಿ ಕಟ್ಟಡ ಜಲಾವೃತಗೊಂಡಿದ್ದು, ಎರಡು ಗಂಟೆಗೊಮ್ಮೆ ಪಂಪ್ಸೆಟ್ ಮೂಲಕ ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಸತತ ನೀರು ಬರುತ್ತಿರುವುದರಿಂದ ಕಟ್ಟಡ ಬೀಳುವ ಭಯದಲ್ಲಿ ಮಾಲೀಕ ಜೀವನ ನಡೆಸುವ ದುಸ್ಥಿತಿ ಎದುರಾಗಿದೆ.