ಕೊಚ್ಚಿನ್- ಮಂಗಳೂರು ಗೇಲ್ ಪೈಪ್ಲೈನ್ ಉದ್ಘಾಟನೆ

ಮಂಗಳೂರು: ಕೊಚ್ಚಿನ್ ಮಂಗಳೂರು ಗೇಲ್ ಪೈಪ್ಲೈನ್ ಕಾಮಗಾರಿಯ ಉದ್ಘಾಟನೆ ಕಾರ್ಯಕ್ರಮ ಆರಂಭವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮಹತ್ವಪೂರ್ಣ ಯೋಜನೆಯಿಂದ ಪರಿಸರ ಸ್ನೇಹಿ ಅನಿಲ ದೊರೆಯಲಿದ್ದು, ಕೈಗಾರಿಕೆಗಳು, ಗೃಹಬಳಕೆಗೆ ಅಗ್ಗದ ದರದಲ್ಲಿ ಇಂಧನ ದೊರೆಯಲಿದೆ. ಇದರಿಂದ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ಅನೇಕ ಸವಾಲುಗಳ ಮಧ್ಯೆ ಪೈಪ್ಲೈನ್ ಕಾಮಗಾರಿ ಉದ್ಘಾಟನೆ ಆಗಿದೆ. ಕೊಯಮತ್ತೂರುವರೆಗಿನ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣವಾಗಲಿದೆ ಎಂದರು.
ಮಂಗಳೂರು- ಕೊಚ್ಚಿನ್ ಗೇಲ್ ಪೈಪ್ ಲೈನ್ ಉದ್ಘಾಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಲಿದ್ದು, ನೇರಪ್ರಸಾರದ ಲಿಂಕ್- https://pmindiawebcast.nic.in/
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.