ಸೆಮಿಫೈನಲ್ನಲ್ಲಿ ಎಡವಿದ ಭಾರತದ ಹಾಕಿ ತಂಡ; ಧೈರ್ಯ ಹೇಳಿದ ರಾಜ್ಯಪಾಲ ಥಾವರಚಂದ್

ಬೆಂಗಳೂರು: ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಹಾಕಿ ಸೆಮಿಫೈನಲ್ನಲ್ಲಿ ಭಾರತ ತಂಡವು ಬೆಲ್ಜಿಯಂ ವಿರುದ್ಧ 2–5 ಅಂತರದಲ್ಲಿ ಸೋಲು ಕಂಡಿದ್ದು, ರಾಜ್ಯದ ನೂತನ ರಾಜ್ಯಪಾಲ ಥಾವರಚಂದ್ ಗೆಹಲೋತ್ ಟ್ವೀಟ್ ಮೂಲಕ ಹಾಕಿ ತಂಡಕ್ಕೆ ಧೈರ್ಯ ತುಂಬಿದ್ದಾರೆ.
ಆಟದಲ್ಲಿ ಸೋಲು, ಗೆಲುವು ಸಹಜ. ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರಷರ ಹಾಕಿ ತಂಡ ಕೆಚ್ಚೆದೆಯ ಪ್ರದರ್ಶನ ನೀಡಿರುವುದಕ್ಕೆ ನನ್ನ ಸಲಾಂ. ಹೋರಾಟದಲ್ಲಿ ಗೆಲುವಿಗಾಗಿ ಸೋತರೆ ಅದು ಸೋಲಾಗುವುದಿಲ್ಲ. ಮರಳಿ ಪ್ರಯತ್ನ ಮಾಡುತ್ತಿರಬೇಕು. ಇದನ್ನೇ ಭಾರತೀಯ ಪುರುಷ ಹಾಕಿ ತಂಡ ಮೈಗೂಡಿಸಿಕೊಳ್ಳಲಿ ಎಂದು ಬಯಸುತ್ತೇನೆ ಎಂದಿದ್ದಾರೆ.
ಆಟದಲ್ಲಿ ಸೋಲು, ಗೆಲುವು ಸಹಜ. ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರಷರ ಹಾಕಿ ತಂಡ ಕೆಚ್ಚೆದೆಯ ಪ್ರದರ್ಶನ ನೀಡಿರುವುದಕ್ಕೆ ನನ್ನ ಸಲಾಂ.
ಹೋರಾಟದಲ್ಲಿ ಗೆಲುವಿಗಾಗಿ ಸೋತರೆ ಅದು ಸೋಲಾಗುವುದಿಲ್ಲ.
ಮರಳಿ ಪ್ರಯತ್ನ ಮಾಡುತ್ತಿರಬೇಕು. ಇದನ್ನೇ ಭಾರತೀಯ ಪುರುಷ ಹಾಕಿ ತಂಡ ಮೈಗೂಡಿಸಿಕೊಳ್ಳಲಿ ಎಂದು ಬಯಸುತ್ತೇನೆ.— Thaawarchand Gehlot (@TCGEHLOT) August 3, 2021
ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ಪಂದ್ಯದಲ್ಲಿ ಎರಡು ಗೋಲು ಬಾರಿಸಲಷ್ಟೇ ಶಕ್ತವಾಯಿತು. ಪೆನಾಲ್ಟಿ ಕಾರ್ನರ್, ಸ್ಟ್ರೋಕ್ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಬೆಲ್ಜಿಯಂ ತಂಡ ಗೆಲುವು ದಾಖಲಿಸಿತು. ಈ ಮೂಲಕ ಫೈನಲ್ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿದೆ.
ಇದನ್ನೂ ಓದಿ: Tokyo Olympics-Hockey| ಸೆಮಿಫೈನಲ್ನಲ್ಲಿ ಎಡವಿದ ಭಾರತದ ಹಾಕಿ ತಂಡ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.