ಸಾಕಷ್ಟು ಬಿ ಖರಾಬು ಜಮೀನು ಲೇಔಟ್ಗಳು, ಇನ್ನಿತರ ಕಟ್ಟಡಗಳ ಸಮುಚ್ಛಯಗಳ ಮಧ್ಯೆ ಸಿಕ್ಕಿಗೊಂಡಿವೆ. ಇವುಗಳನ್ನು ಸಿಕ್ಕಿಬಿದ್ದ ಬಿ ಖರಾಬು ಜಮೀನು ಎಂದು ಕರೆಯಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಇದು ಅನ್ವಯ ಆಗುವುದಿಲ್ಲ. ಅಲ್ಲದೆ, ನಗರ ಪ್ರದೇಶದಲ್ಲಿ ಕೃಷಿ ಜಮೀನು ಇದ್ದರೆ, ಅವುಗಳನ್ನು ಸಕ್ರಮ ಮಾಡಿಕೊಡುವುದಿಲ್ಲ. ಈ ಸಂಬಂಧ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲವಾದರೆ, ಸರ್ಕಾರವೇ ಬಿ ಖರಾಬು ಜಮೀನು ಖುಲ್ಲಾ ಮಾಡುವ ಬಗ್ಗೆ ಆದೇಶ ಹೊರಡಿಸುತ್ತದೆ ಎಂದು ಅವರು ಹೇಳಿದರು.