‘ಚಿಂಚೋಳಿ, ಕಾಳಗಿ, ಚಿತ್ತಾಪುರ, ಜೇವರ್ಗಿ, ಅಫಜಲಪುರ, ಸೇಡಂ, ಯಡ್ರಾಮಿ ತಾಲ್ಲೂಕುಗಳ ರೈತರೇ ಹೆಚ್ಚು ಸಂಕಷ್ಟ
ಎದುರಿಸುತ್ತಿದ್ದಾರೆ. ಜಿಲ್ಲೆಯ ಕೃಷಿ ಭೂಮಿಯ ಶೇ 80ರಷ್ಟು ಪ್ರದೇಶದಲ್ಲಿ ತೊಗರಿಯನ್ನೇ ಬೆಳೆಯುವುದು ವಾಡಿಕೆ. ಇದು ಶುಷ್ಕ ಪ್ರದೇಶದ ಬೆಳೆ. ಅತಿವೃಷ್ಟಿಯ ಕಾರಣ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದ್ದು ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ’ ಎನ್ನುವುದು ಕಲಬುರಗಿ ಜಂಟಿ ಕೃಷಿ ನಿರ್ದೆಶಕ ರಿತೇಂದ್ರನಾಥ ಸುಗೂರ ಅವರ ಹೇಳಿಕೆ.