1980ರಲ್ಲಿ ‘ನ್ಯಾಯ ನೀತಿ ಧರ್ಮ ಚಿತ್ರ’ದ ಮೂಲಕ ನಿರ್ದೇಶಕರಾದರು. ಶಂಕರ್ ಸುಂದರ್, ಆಶಾ, ಅವಳ ನೆರಳು, ಧರ್ಮಯುದ್ಧ, ಮೇರಿ ಅದಾಲತ್, ಗುಂಡ–ಗುರು, ಗುರು ಜಗದ್ಗುರು, ಕಾಡಿನ ರಾಜ, ದೇವರ ಮನೆ, ಕಟ್ಟು ರಾಣಿ, ಪ್ರೀತಿ, ಅಂತಿಮ ತೀರ್ಪು, ಇನ್ಸ್ಪೆಕ್ಟರ್ ಕ್ರಾಂತಿಕುಮಾರ್, ಆಪಾದ್ಭಾಂದವ, ಕೃಷ್ಣ ಮೆಚ್ಚಿದ ರಾಧೆ, ಪದ್ಮವ್ಯೂಹ, ನ್ಯಾಯಕ್ಕಾಗಿ ನಾನು, ಅಜಯ್ ವಿಜಯ್, ಕೆಂಪು ಸೂರ್ಯ, ಪುಟ್ಟ ಹೆಂಡ್ತಿ, ಮೈಸೂರು ಜಾಣ, ಸೂರ್ಯೋದಯ, ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಮಂಡ್ಯದ ಗಂಡು, ಶ್ರಾವಣ ಸಂಜೆ, ಬೇಟೆಗಾರ, ರ್ಯಾಂಬೋ ರಾಜ, ರಿವಲ್ವಾರ್ ರಾಣಿ, ಜೆನಿಫರ್ ಈ ಲವ್ ಯು ಚಿತ್ರಗಳನ್ನು ಎ.ಟಿ.ರಘು ನಿರ್ದೇಶಿಸಿದ್ದಾರೆ. ರಘು ಅವರು ಕನ್ನಡ ಚಿತ್ರ ಮಾತ್ರವಲ್ಲದೆ, ಹಿಂದಿ ಹಾಗೂ ಮಲಯಾಲಂ ಚಿತ್ರವನ್ನೂ ನಿರ್ದೇಶಿಸಿದ್ದಾರೆ. 1984ರಲ್ಲಿ ಮೇರಿ ಅದಾಲತ್ ಚಿತ್ರವನ್ನು ನಿರ್ದೇಶಿಸಿದ್ದರು. 1985ರಲ್ಲಿ ಮಲಯಾಲಂನ ಕಟ್ಟು ರಾಣಿ ಚಿತ್ರ ನಿರ್ದೇಶಿಸಿದ್ದ ಹೆಗ್ಗಳಿಕೆ ರಘು ಅವರದ್ದು.