ಪಕ್ಷದ ಪ್ರಣಾಳಿಕೆ ತಂಡವನ್ನು ಭೇಟಿಯಾಗಿ ಜಿಲ್ಲಾವಾರು, ತಾಲ್ಲೂಕು ವಾರು ಯಾರೆಲ್ಲ ತಂಡದಲ್ಲಿರಬೇಕು ಎಂದು ಚರ್ಚಿಸಲಾಗಿದೆ. ಪಕ್ಷದ ಕಚೇರಿ ಯಲ್ಲಿ ಸೋಮವಾರ ಮತ್ತೊಂದು ಸಭೆ ನಡೆಯಲಿದ್ದು, ಎಲ್ಲಾ ಜಿಲ್ಲೆಗಳ 200 ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಲಿದ್ದಾರೆ. ಪ್ರಣಾಳಿಕೆ ಶೀರ್ಷಿಕೆಯನ್ನು ಸದ್ಯವೇ ಅಂತಿಮವಾಗಲಿದೆ. ಮಹಿಳೆಯರು, ಯುವಜನತೆ, ವೃದ್ಧರು, ಅಂಗವಿಕಲರಿಗೆ ನೀಡಬೇಕಾದ ಕಾರ್ಯಕ್ರಮಗಳ ಬಗ್ಗೆ ನಿರ್ಧಾರವಾಗಲಿದೆ ಎಂದರು.