‘ಈ ಹಿಂದೆ 20 ತಿಂಗಳು ಅಧಿಕಾರದುದ್ದಕ್ಕೂ ಕಾಂಗ್ರೆಸ್ನವರು ನನಗೆ ಕಿರುಕುಳ ಕೊಟ್ಟರೂ ಸಾಕಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನಾನು ಕೊಟ್ಟಿದ್ದೇನೆ. ರಾಜ್ಯದಲ್ಲಿ ಸಾರಾಯಿ, ಲಾಟರಿ ನಿಷೇಧ ಮಾಡಿದ್ದೇನೆ. ಇದು ಬಡವರನ್ನು ಉದ್ಧಾರ ಮಾಡಲು ನಾನು ಮಾಡಿದ ಕೆಲಸ. ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುವ ಯೋಜನೆ ನನ್ನದಾಗಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಲಾಟರಿ, ಮಟಕಾ ದಂಧೆಗಳನ್ನು ನಡೆಸಲು ಮುಕ್ತ ಅವಕಾಶ ಕೊಡಲಿಲ್ಲವೆ ಸಿದ್ದರಾಮಯ್ಯನವರೆ’ ಎಂದು ಪ್ರಶ್ನಿಸಿದರು.