‘ಬಿಜೆಪಿ ಆಡಳಿತವೆಂದರೆ ಮನುಷ್ಯರಷ್ಟೇ ಅಲ್ಲ ದೇವರುಗಳೂ ಭಯಪಡುತ್ತಾರೆ! ಬಿಜೆಪಿಗೆ ದೇವಾಲಯಗಳನ್ನು ಕೆಡವಿದ ಇತಿಹಾಸವೇ ಇದೆ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 80 ದೇವಾಲಯಗಳನ್ನು ಕೆಡವಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಶಿಯಲ್ಲಿ ದೇವಸ್ಥಾನಗಳನ್ನು ಕೆಡವಿ, ಶಿವನ ಪ್ರತಿಮೆ ಎಸೆದಿದ್ದರು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ದೇಗುಲಗಳನ್ನು ಕೆಡವಲು ಶುರುಮಾಡಿದೆ’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.