<p><strong>ಬೆಂಗಳೂರು</strong>: ವಿವಿಧ ಮಸೂದೆಗಳ ಅಂಗೀಕಾರದ ನಡುವೆ ರಾಷ್ಟ್ರೀಯ ಶಿಕ್ಷಣ ನೀತಿ ಮೇಲಿನ ಚರ್ಚೆ ಮುಂದುವರಿದು ಕಲಾಪ ತಡರಾತ್ರಿ 12.35ರವರೆಗೂ ನಡೆಯಿತು.</p>.<p>ಗುರುವಾರ ಸಂಜೆ 4 35ರನಂತರ ಆರಂಭವಾದ ಕಲಾಪದಲ್ಲಿ ನಿಯಮ 330ರ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಚರ್ಚೆ ಆರಂಭವಾಗಿತ್ತು. ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದವೂ ನಡೆದಿತ್ತು.</p>.<p>ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನಕ್ಕೆ ಬಂದು ಕರ್ನಾಟಕ ಧನವಿನಿಯೋಗ ಮಸೂದೆ (ಪೂರಕ ಅಂದಾಜು) ಮಂಡಿಸಿ ಅನುಮೋದನೆ ಪಡೆದರು. ಬಳಿಕ ಇತರ ಮಸೂದೆಗಳನ್ನು ಸಚಿವರಾದ ಮಾಧುಸ್ವಾಮಿ, ಅರಗ ಜ್ಞಾನೇಂದ್ರ ಹಾಗೂ ಬಿ.ಸಿ. ನಾಗೇಶ್ ಮಂಡಿಸಿ, ಅನುಮೋದನೆ ಪಡೆದರು.</p>.<p>ಈ ವೇಳೆ ಅರ್ಧಕ್ಕೆ ನಿಂತಿದ್ದ ಎನ್ಇಪಿ ಮೇಲಿನ ಚರ್ಚೆ ಪುನಃ ಮುಂದುವರಿದೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸದಸ್ಯರ ಪ್ರಶ್ನೆ ಸಂಶಯಗಳಿಗೆ ಉತ್ತರಿಸಿದರು.</p>.<p>ನಂತರ ಸದಸ್ಯರು ಮತ್ತಷ್ಟು ಸ್ಪಷ್ಟೀಕರಣ ಕೋರಿದರು. ಹೀಗೆ ಮಧ್ಯರಾತ್ರಿ 12.35ರ ವರೆಗೂ ಕಲಾಪ ನಡೆದಿದ್ದು, ನಂತರ ಸಭಾಪತಿಯವರ ಸೂಚನೆಯಂತೆ ಚರ್ಚೆಯನ್ನು ಪೂರ್ಣಗೊಳಿಸಲಾಯಿತು. ಕಲಾಪವನ್ನು ಶುಕ್ರವಾರ ಬೆಳಿಗೆ 10 ಗಂಟೆಗೆ ಮುಂದೂಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಿವಿಧ ಮಸೂದೆಗಳ ಅಂಗೀಕಾರದ ನಡುವೆ ರಾಷ್ಟ್ರೀಯ ಶಿಕ್ಷಣ ನೀತಿ ಮೇಲಿನ ಚರ್ಚೆ ಮುಂದುವರಿದು ಕಲಾಪ ತಡರಾತ್ರಿ 12.35ರವರೆಗೂ ನಡೆಯಿತು.</p>.<p>ಗುರುವಾರ ಸಂಜೆ 4 35ರನಂತರ ಆರಂಭವಾದ ಕಲಾಪದಲ್ಲಿ ನಿಯಮ 330ರ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಚರ್ಚೆ ಆರಂಭವಾಗಿತ್ತು. ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದವೂ ನಡೆದಿತ್ತು.</p>.<p>ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನಕ್ಕೆ ಬಂದು ಕರ್ನಾಟಕ ಧನವಿನಿಯೋಗ ಮಸೂದೆ (ಪೂರಕ ಅಂದಾಜು) ಮಂಡಿಸಿ ಅನುಮೋದನೆ ಪಡೆದರು. ಬಳಿಕ ಇತರ ಮಸೂದೆಗಳನ್ನು ಸಚಿವರಾದ ಮಾಧುಸ್ವಾಮಿ, ಅರಗ ಜ್ಞಾನೇಂದ್ರ ಹಾಗೂ ಬಿ.ಸಿ. ನಾಗೇಶ್ ಮಂಡಿಸಿ, ಅನುಮೋದನೆ ಪಡೆದರು.</p>.<p>ಈ ವೇಳೆ ಅರ್ಧಕ್ಕೆ ನಿಂತಿದ್ದ ಎನ್ಇಪಿ ಮೇಲಿನ ಚರ್ಚೆ ಪುನಃ ಮುಂದುವರಿದೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸದಸ್ಯರ ಪ್ರಶ್ನೆ ಸಂಶಯಗಳಿಗೆ ಉತ್ತರಿಸಿದರು.</p>.<p>ನಂತರ ಸದಸ್ಯರು ಮತ್ತಷ್ಟು ಸ್ಪಷ್ಟೀಕರಣ ಕೋರಿದರು. ಹೀಗೆ ಮಧ್ಯರಾತ್ರಿ 12.35ರ ವರೆಗೂ ಕಲಾಪ ನಡೆದಿದ್ದು, ನಂತರ ಸಭಾಪತಿಯವರ ಸೂಚನೆಯಂತೆ ಚರ್ಚೆಯನ್ನು ಪೂರ್ಣಗೊಳಿಸಲಾಯಿತು. ಕಲಾಪವನ್ನು ಶುಕ್ರವಾರ ಬೆಳಿಗೆ 10 ಗಂಟೆಗೆ ಮುಂದೂಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>