ಅಧಿವೇಶನದ ಮಧ್ಯೆ (ಡಿ. 23) ಮೈಸೂರು– ಚಾಮರಾಜನಗರ ಭಾಗದ ನಾಯಕರ ಜೊತೆ ಸಭೆ ನಡೆಸಲು ಶಿವಕುಮಾರ್ ಮುಂದಾಗಿದ್ದ ಬಗ್ಗೆ ಸಿದ್ದರಾಮಯ್ಯ ನೇರವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ‘ನಾನಿಲ್ಲದೆ ಮೈಸೂರು ಭಾಗದ ಸಭೆ ನಡೆಸಬೇಡಿ’ ಎಂದು ಸೂಚಿಸಿದ್ದರು. ‘ಜೊತೆಯಲ್ಲಿ ತೆರಳಿ ಸಭೆ ನಡೆಸದಿದ್ದರೆ ತಪ್ಪು ಸಂದೇಶ ರವಾನೆಯಾಗಲಿದೆ’ ಎಂದೂ ಖಾರವಾಗಿಯೇ ಹೇಳಿದ್ದರು.