ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಗರು ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕೋ, ಬೇಡವೋ ಎಂದು ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರಂತೆ. ಆದರೆ, ಪೆಟ್ರೋಲ್ ಬೆಲೆ ಇಳಿಸಬೇಕೋ, ಬೇಡವೋ?, ಉದ್ಯೋಗ ನೀಡಬೇಕೋ, ಬೇಡವೋ?, ಲಸಿಕೆ ನೀಡಬೇಕೋ, ಲಾಕ್ಡೌನ್ ಮಾಡಬೇಕೋ?, ಬೆಲೆ ಏರಿಕೆ ತಡೆಯಬೇಕೋ, ಬೇಡವೋ? ಮುಂತಾದ ಜನಪರ ವಿಚಾರಗಳ ಅಭಿಪ್ರಾಯ ಕೇಳುವ ತಾಕತ್ತಿದೆಯೇ ಬಿಜೆಪಿಗೆ?’ ಎಂದು ಪ್ರಶ್ನಿಸಿದೆ.