ಈ ವಿಚಾರವಾಗಿ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ‘ಗಾನವಿ ಅವರು ಜೀವಂತವಾಗಿದ್ದಾಗ ರೋಗಿಗಳನ್ನು ಕಾಳಜಿಯಿಂದ ಆರೈಕೆ ಮಾಡಿದರು. ಮರಣದ ನಂತರ ಅವರು ತಮ್ಮ ಅಂಗಾಂಗಗಳನ್ನು ಉಡುಗೊರೆಯಾಗಿ ನೀಡಿದರು. ದುರಂತ ಸಾವಿನ ನಂತರ ತಮ್ಮ ಅಂಗಾಂಗಗಳನ್ನು ದಾನ ಮಾಡಿದ 22 ವರ್ಷದ ಸ್ಟಾಫ್ ನರ್ಸ್ ಟಿ.ಕೆ.ಗಾನವಿ ಅವರು ‘ಪರೋಪಕಾರಾರ್ಥಂ ಯೋ ಜೀವತಿ ಸ ಜೀವತಿ’(ಯಾರು ಬೇರೆಯವರಿಗೋಸ್ಕರ ಜೀವಿಸುತ್ತಾರೋ ಅವರು ಮಾತ್ರ ಬದುಕಿರುತ್ತಾರೆ)’ ಎಂದು ತಿಳಿಸಿದ್ದಾರೆ.