ಇವರು ಅಕ್ಕನ ಮಗಳನ್ನೇ ಮದುವೆಯಾಗಿದ್ದರು. ತಮ್ಮ ಸಾಧುಶೆಟ್ಟಿ ಸಮಾಜದಲ್ಲಿ ಹೆಣ್ಣುಮಕ್ಕಳು ಓದುವುದಿಲ್ಲ ಎಂಬ ಆಪಾದನೆಯಿಂದ ಮುಕ್ತವಾಗಬೇಕು ಎಂದು ಪತ್ನಿ ಅಶ್ವಿನಿಗೆ ಓದಲು ಪ್ರೇರಣೆ ನೀಡಿದ್ದರು. ಪತಿಯ ನಿರೀಕ್ಷೆ ಹುಸಿಗೊಳಿಸದ ಅಶ್ವಿನಿ ಪದವಿ ನಂತರ ಕೆಎಎಸ್ ತೇರ್ಗಡೆಯಾಗಿದ್ದರು. ಪ್ರಸ್ತುತ ತುಮಕೂರಿನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ತಹಶೀಲ್ದಾರ್ ಹುದ್ದೆ ಪೂರ್ಣಪ್ರಮಾಣದಲ್ಲಿ ದೊರಕುವ ಮೊದಲೇ ಪತಿ ಶ್ರೀನಿವಾಸ್ ನಿಧನರಾಗಿದ್ದಾರೆ.