ಇಂತಹ ಹುದ್ದೆಗಳಿಗೆ ನೇಮಕವಾದವರು ಆಡಳಿತ ಯಂತ್ರದ ಭಾಗವಾಗುತ್ತಾರೆ. ಕರ್ನಾಟಕದಲ್ಲಿ ಕೆಇಎ ಹಾಗೂ ಕರ್ನಾಟಕ ಲೋಕಸೇವಾ ಆಯೋಗವು ಯಾವುದೇ ಪರೀಕ್ಷೆ ನಡೆಸಿದರೂ ಫಲಿತಾಂಶ ಪ್ರಕಟಿಸಲು ವಿಳಂಬ ತೋರುತ್ತಲೇ ಇದೆ. ಈ ರೀತಿ ಧೋರಣೆಯಿಂದಾಗಿ ಮುಂದೆ ಆಡಳಿತಾಂಗಕ್ಕೆ ಬರುವವರು ಆರಂಭದಲ್ಲೇ ಸಿನಿಕರಾಗುವ, ವ್ಯವಸ್ಥೆ ಬಗ್ಗೆಯೇ ಹತಾಶರಾಗುವ ಸ್ಥಿತಿ ತಲುಪುವಂತಾಗಿದೆ. ಈ ಬೆಳವಣಿಗೆ ರಾಜ್ಯಕ್ಕೆ, ಆಡಳಿತಕ್ಕೆ ಒಳಿತು ತರುವುದಿಲ್ಲ. ಕೆಇಎ, ಕೆಪಿಎಸ್ಸಿಯನ್ನು ಚುರುಕುಗೊಳಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.