'ಗಣರಾಜ್ಯೋತ್ಸವದ ದಿನ ಅತಿ ಬಿಗಿ ಬಂದೋಬಸ್ತ್ ಇರುತ್ತದೆ. ಯುವಕನೊಬ್ಬ ಟ್ರ್ಯಾಕ್ಟರ್ ತೆಗೆದುಕೊಂಡು, ಕೋಟೆಯ ಹತ್ತಿರ ಹೋಗಿ ಧ್ವಜ ಕಂಬ ಏರಿ ಧರ್ಮದ ಧ್ವಜವೊಂದನ್ನು ಹಾರಿಸುವವರೆಗೂ ಪೊಲೀಸರು ನಿದ್ದೆ ಮಾಡುತ್ತಿದ್ದರೆ? ಗುಪ್ತಚರ ಇಲಾಖೆಗೆ ಇದರ ಮಾಹಿತಿ ಇರಲಿಲ್ಲವೇ' ಎಂದು ಪ್ರಶ್ನಿಸಿದ ಅವರು, 'ಧ್ವಜ ಹಾರಿಸಿದ ವ್ಯಕ್ತಿ ನರೇಂದ್ರ ಮೋದಿಯವರೊಂದಿಗೆ ಅವರ ಮನೆಯಲ್ಲಿಯೇ ಫೋಟೊ ತೆಗೆಸಿಕೊಂಡಿದ್ದಾನೆ. ಅಂದಿನ ಘಟನೆ ವ್ಯವಸ್ಥಿತ ಪಿತೂರಿ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ' ಎಂದರು.