ಸದಾಶಿವನಗರದಲ್ಲಿರುವ ಶಿವಕುಮಾರ್ ಅವರ ಮನೆಯಲ್ಲೇ ಭೇಟಿ ನಡೆದಿದೆ. ಮಧು ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆ ದಿನಾಂಕ ನಿಗದಿಗಾಗಿ ಭೇಟಿ ನಡೆದಿದೆ ಎಂಬ ಸುದ್ದಿಹಬ್ಬಿತ್ತು. ಆದರೆ, ಮಧು ಬಂಗಾರಪ್ಪ ಅವರು ಇದನ್ನು ನಿರಾಕರಿಸಿದ್ದು, ಎಂದಿನಂತೆ ಶಿವಕುಮಾರ್ ಅವರ ಜತೆಗಿನ ಸೌಹಾರ್ದ ಭೇಟಿಯಷ್ಟೆ ಎಂದು ತಿಳಿಸಿದ್ದಾರೆ.