ಅಲ್ಲದೆ, ಸದನದಲ್ಲಿ ನಿಲುವಳಿ ಮಂಡಿಸುವ ವಿಷಯದ ಬಗ್ಗೆಯೂ ಹಿರಿಯ ನಾಯಕರು ವಿಚಾರ ವಿನಿಮಯ ನಡೆಸಿದ್ದಾರೆ. ಕೊರೊನಾ, ಪ್ರವಾಹ, ಡಿ.ಜೆ ಹಳ್ಳಿ ಗಲಭೆ, ಡ್ರಗ್ಸ್ ಸೇರಿದಂತೆ ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವ ಸಂದರ್ಭದಲ್ಲಿ ನಿಲುವಳಿ ಸೂಚನೆ ಮಂಡಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು ಎಂದೂ ಮೂಲಗಳು ಹೇಳಿವೆ.