<p><strong>ಬೆಂಗಳೂರು</strong>: ನಗರದ ಮದ್ರಾಸ್ ಎಂಜಿನಿಯರಿಂಗ್(ಎಂಇಜಿ)ಕೇಂದ್ರದಲ್ಲಿ ಶುಕ್ರವಾರ 242ನೇ ’ಮದ್ರಾಸ್ ಸ್ಯಾಪರ್ಸ್ ದಿನ’ವನ್ನು ಸಂಭ್ರಮದಿಂದ ಆಚರಿಸಲಾಯಿತು.</p>.<p>ಎಂಇಜಿ ಯುದ್ಧ ಸ್ಮಾರಕದಲ್ಲಿಕಮಾಂಡಂಟ್ ಬ್ರಿಗೇಡಿಯರ್ ಶಲಭ್ ಗುಪ್ತಾ ಅವರು ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.</p>.<p>ನಿವೃತ್ತ ಕ್ಯಾಪ್ಟನ್ ಗೋವಿಂದಸ್ವಾಮಿ ಅವರ ಪುತ್ಥಳಿಯನ್ನು ’ಎಂಇಜಿ ಡ್ರಿಲ್ ಸ್ಕ್ವೇರ್’ ಮೈದಾನದಲ್ಲಿ ಸ್ವತಃ ಅವರೇ ಅನಾವರಣಗೊಳಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಯೋಧರನ್ನು ಪಥಸಂಚಲನಕ್ಕೆ ಸಜ್ಜುಗೊಳಿಸುವಲ್ಲಿ ಗೋವಿಂದಸ್ವಾಮಿ ಖ್ಯಾತಿ ಪಡೆದಿದ್ದಾರೆ.ಗೋವಿಂದಸ್ವಾಮಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಎಂಇಜಿ ಯೋಧರು, ಗಣರಾಜ್ಯೋತ್ಸವ ಪರೇಡ್ನಲ್ಲಿ ಇದುವರೆಗೆ ಒಂಬತ್ತು ಬಾರಿ ಪದಕ ಪಡೆದಿದ್ದಾರೆ.</p>.<p>ಎಂಇಜಿ, ಭಾರತೀಯ ಸೇನೆಯ ‘ಕಾರ್ಪ್ಸ್ ಆಫ್ ಎಂಜಿನಿಯರ್’ನ ಘಟಕವಾಗಿದೆ. ಮೂರು ‘ಕಾರ್ಪ್ಸ್ ಆಫ್ ಎಂಜಿನಿಯರ್’ಗಳಲ್ಲೇ ಇದು ಅತ್ಯಂತ ಹಳೆಯದಾಗಿದೆ. ಎಂಇಜಿಯನ್ನು ಅನೌಪಚಾರಿಕವಾಗಿ ‘ಮದ್ರಾಸ್ ಸ್ಯಾಪರ್ಸ್’ ಎಂದು ಸಹ ಕರೆಯಲಾಗುತ್ತದೆ. 1780ರ ಸೆಪ್ಟೆಂಬರ್ 30ರಂದು ಎಂಇಜಿ ಸ್ಥಾಪಿಸಲಾಗಿತ್ತು. ಈ 242 ವರ್ಷಗಳಲ್ಲಿ ಜಗತ್ತಿನಾದ್ಯಂತ ನಡೆದ ಹಲವು ಯುದ್ಧಗಳಲ್ಲಿ ಎಂಇಜಿ ಯೋಧರು ಭಾಗವಹಿಸಿದ್ದಾರೆ.</p>.<p>ಕ್ರೀಡೆಯಲ್ಲೂ ಎಂಇಜಿ ಯೋಧರು ಅತ್ಯುತ್ತಮ ಸಾಧನೆ ತೋರಿದ್ದು, ಹಲವರು ಪದ್ಮಶ್ರೀ, ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಮದ್ರಾಸ್ ಎಂಜಿನಿಯರಿಂಗ್(ಎಂಇಜಿ)ಕೇಂದ್ರದಲ್ಲಿ ಶುಕ್ರವಾರ 242ನೇ ’ಮದ್ರಾಸ್ ಸ್ಯಾಪರ್ಸ್ ದಿನ’ವನ್ನು ಸಂಭ್ರಮದಿಂದ ಆಚರಿಸಲಾಯಿತು.</p>.<p>ಎಂಇಜಿ ಯುದ್ಧ ಸ್ಮಾರಕದಲ್ಲಿಕಮಾಂಡಂಟ್ ಬ್ರಿಗೇಡಿಯರ್ ಶಲಭ್ ಗುಪ್ತಾ ಅವರು ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.</p>.<p>ನಿವೃತ್ತ ಕ್ಯಾಪ್ಟನ್ ಗೋವಿಂದಸ್ವಾಮಿ ಅವರ ಪುತ್ಥಳಿಯನ್ನು ’ಎಂಇಜಿ ಡ್ರಿಲ್ ಸ್ಕ್ವೇರ್’ ಮೈದಾನದಲ್ಲಿ ಸ್ವತಃ ಅವರೇ ಅನಾವರಣಗೊಳಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಯೋಧರನ್ನು ಪಥಸಂಚಲನಕ್ಕೆ ಸಜ್ಜುಗೊಳಿಸುವಲ್ಲಿ ಗೋವಿಂದಸ್ವಾಮಿ ಖ್ಯಾತಿ ಪಡೆದಿದ್ದಾರೆ.ಗೋವಿಂದಸ್ವಾಮಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಎಂಇಜಿ ಯೋಧರು, ಗಣರಾಜ್ಯೋತ್ಸವ ಪರೇಡ್ನಲ್ಲಿ ಇದುವರೆಗೆ ಒಂಬತ್ತು ಬಾರಿ ಪದಕ ಪಡೆದಿದ್ದಾರೆ.</p>.<p>ಎಂಇಜಿ, ಭಾರತೀಯ ಸೇನೆಯ ‘ಕಾರ್ಪ್ಸ್ ಆಫ್ ಎಂಜಿನಿಯರ್’ನ ಘಟಕವಾಗಿದೆ. ಮೂರು ‘ಕಾರ್ಪ್ಸ್ ಆಫ್ ಎಂಜಿನಿಯರ್’ಗಳಲ್ಲೇ ಇದು ಅತ್ಯಂತ ಹಳೆಯದಾಗಿದೆ. ಎಂಇಜಿಯನ್ನು ಅನೌಪಚಾರಿಕವಾಗಿ ‘ಮದ್ರಾಸ್ ಸ್ಯಾಪರ್ಸ್’ ಎಂದು ಸಹ ಕರೆಯಲಾಗುತ್ತದೆ. 1780ರ ಸೆಪ್ಟೆಂಬರ್ 30ರಂದು ಎಂಇಜಿ ಸ್ಥಾಪಿಸಲಾಗಿತ್ತು. ಈ 242 ವರ್ಷಗಳಲ್ಲಿ ಜಗತ್ತಿನಾದ್ಯಂತ ನಡೆದ ಹಲವು ಯುದ್ಧಗಳಲ್ಲಿ ಎಂಇಜಿ ಯೋಧರು ಭಾಗವಹಿಸಿದ್ದಾರೆ.</p>.<p>ಕ್ರೀಡೆಯಲ್ಲೂ ಎಂಇಜಿ ಯೋಧರು ಅತ್ಯುತ್ತಮ ಸಾಧನೆ ತೋರಿದ್ದು, ಹಲವರು ಪದ್ಮಶ್ರೀ, ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>