ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರು ಮಂತ್ರಿ ಆಗ್ತಾರೆ, ಹೇಗೆ ಆಗ್ತಾರೆ ಎಂಬ ಕಥೆಗಳೆಲ್ಲ ಗೊತ್ತು. ಸಚಿವ ಸ್ಥಾನಕ್ಕಾಗಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಮನೆ ಬಾಗಿಲಿಗೆ ಹೋಗಿಲ್ಲ. ಯತ್ನಾಳ ಯಾವತ್ತೂ ಗುಡುಗುತ್ತಿರುತ್ತಾನೆ. ಸದ್ದಡಗಿಸುವುದು ಸಾಧ್ಯವಿಲ್ಲ. ಸಂಪುಟ ವಿಸ್ತರಣೆಯ ನಂತರ ನನ್ನ ವಿಚಾರಗಳನ್ನು ಹೇಳುತ್ತೇನೆ’ ಎಂದರು.