ಸಚಿವ ಆಗಲು ಓಲೈಸುವುದಾಗಲ್ಲ: ಯತ್ನಾಳ

ವಿಜಯಪುರ: ‘ಸಚಿವ ಆಗಬೇಕೆಂದರೆ ದೆಹಲಿಗೆ ಹೋಗಿ ಕೂರಬೇಕು, ಓಲೈಸಬೇಕು. ಅದೆಲ್ಲ ನನ್ನಿಂದ ಆಗಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರು ಮಂತ್ರಿ ಆಗ್ತಾರೆ, ಹೇಗೆ ಆಗ್ತಾರೆ ಎಂಬ ಕಥೆಗಳೆಲ್ಲ ಗೊತ್ತು. ಸಚಿವ ಸ್ಥಾನಕ್ಕಾಗಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಮನೆ ಬಾಗಿಲಿಗೆ ಹೋಗಿಲ್ಲ. ಯತ್ನಾಳ ಯಾವತ್ತೂ ಗುಡುಗುತ್ತಿರುತ್ತಾನೆ. ಸದ್ದಡಗಿಸುವುದು ಸಾಧ್ಯವಿಲ್ಲ. ಸಂಪುಟ ವಿಸ್ತರಣೆಯ ನಂತರ ನನ್ನ ವಿಚಾರಗಳನ್ನು ಹೇಳುತ್ತೇನೆ’ ಎಂದರು.
ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಹಿಂದೂ:
ಸಿದ್ದರಾಮಯ್ಯ ಒಳ್ಳೆಯ ನಾಯಕ ಆದರೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಪಾರ್ಟಿಗೆ ಸೇರಿ ಕ್ರಾಸ್ ಬ್ರೀಡ್ ಹಿಂದೂ ಆಗಿದ್ದಾರೆ ಎಂದು ಕುಟುಕಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.