ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ‘ಕರ್ನಾಟಕ–ಭಾರತ್ ಗೌರವ್ ಕಾಶಿ ದರ್ಶನ’ ರೈಲು ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 11 ರಂದು ಚಾಲನೆ ನೀಡಲಿದ್ದಾರೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
‘ಮೋದಿಯವರ ಪ್ರಯತ್ನದಿಂದ ಪುನರ್ ನಿರ್ಮಾಣವಾಗಿರುವ ಕಾಶಿ ಕಾರಿಡಾರ್ ಅನ್ನು ರಾಜ್ಯದ ಜನರು ಕಡಿಮೆ ವೆಚ್ಚದಲ್ಲಿ ನೋಡಲಿ ಎಂಬ ಉದ್ದೇಶದಿಂದ ಕಾಶಿ ದರ್ಶನ ಯಾತ್ರೆ ಆಯೋಜಿಸಲಾಗಿದೆ’ ಎಂದರು.
ಇದೇ 23ರಂದು 2ನೇ ಟ್ರಿಪ್ ಹೊರಡಲಿದ್ದು, ಟಿಕೆಟ್ ಬುಕ್ಕಿಂಗ್ ಮಾಡಿದ ಎರಡೇ ದಿನಗಳಲ್ಲಿ ಎಲ್ಲ ಟಿಕೆಟ್ಗಳೂ ಮಾರಾಟವಾಗಿವೆ’ ಎಂದು ಜೊಲ್ಲೆ ಹೇಳಿದರು.