ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ಜೆಡಿಎಸ್ನವರು ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತಾಡಿದರೆ ಅವರ ಗೌರವ ಕಡಿಮೆ ಆಗುತ್ತದೆಯೇ ಹೊರತು, ಸಂಘದ ಗೌರವ ಕಡಿಮೆ ಆಗೋದಿಲ್ಲ.ಈ ದೇಶದ ರಾಷ್ಟ್ರಪತಿ, ಪ್ರಧಾನಿ, ನಾವು ಆರ್ ಎಸ್ ಎಸ್ ಮೂಲಕವೇ ಬಂದಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ 26 ರಾಜ್ಯಗಳಲ್ಲಿನ ಬಹುತೇಕ ಮುಖಂಡರು ಆರ್.ಎಸ್.ಎಸ್ನಿಂದ ಬಂದವರಾಗಿದ್ದಾರೆ’ ಎಂದರು.