ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲದಲ್ಲಿ ಕೆರೆ ಕೋಡಿ ಒಡೆದು ರಸ್ತೆಯೇ ಕೊಚ್ಚಿ ಹೋಗಿದ್ದು, ಕೆಂಗಲ್– ಕಣ್ವ ಜಲಾಶಯ ರಸ್ತೆ ಸಂಪರ್ಕ ಕಡಿತವಾಗಿದೆ. ಕನಕಪುರ ತಾಲ್ಲೂಕಿನ ಬೂದಗುಪ್ಪೆ– ಬರಡನಹಳ್ಳಿ ಬಳಿ ಎರಡು ಸೇತುವೆ, ಮುಳ್ಳಳ್ಳಿ ಬಳಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಭಾಗಶಃ ಹಾನಿಗೀಡಾಗಿವೆ. ಹಾರೋಬೆಲೆ ಜಲಾಶಯದ ಬಳಿ ಸುವಣ್ಣಮಕ್ಕಿ ಕೆರೆ ಏರಿ ಒಡೆಯುವ ಆತಂಕ ಎದುರಾಗಿದೆ.