ಡ್ರಗ್ಸ್ ಮಾಫಿಯಾದ ಹಣವೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಯಿತು ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ, ‘ಆಧಾರ ರಹಿತ ಮಾತು, ಆರೋಪಗಳಿಗೆ ಉತ್ತರ ಕೊಡಲ್ಲ. ಯಾವುದೇ ವಿಚಾರ ಮಾತನಾಡಿದರೂ ಸಾಕ್ಷ್ಯಾಧಾರ ಇರಬೇಕು. ಅವರ ವಾದವನ್ನು ಪುಷ್ಟೀಕರಿಸದಿದ್ದರೆ ವಿಚಾರಕ್ಕಿಂತ ಉಗುಳೇ ಹೆಚ್ಚಾಗುತ್ತದೆ. ಆ ಉಗುಳಿನ ಬಗ್ಗೆ ನಾನು ಮಾತನಾಡಲ್ಲ’ ಎಂದು ತಿರುಗೇಟು ನೀಡಿದರು.