ಸಭೆಯ ನಂತರ ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಅರವಿಂದ ಬೆಲ್ಲದ, ‘ಮೇಲುಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಬಿಆರ್ಟಿಎಸ್ ಮಾರ್ಗದ ಮೂರು ಬಸ್ ನಿಲ್ದಾಣದ ನಡುವೆಯೇ ಸೇತುವೆಯ ಪಿಲ್ಲರ್ಗಳು ಬರಲಿವೆ. ವಿನ್ಯಾಸದಂತೆ ಪಿಲ್ಲರ್ಗಳನ್ನು ಅಲ್ಲಿಯೇ ನಿರ್ಮಿಸಿ, ಬಸ್ ನಿಲ್ದಾಣವನ್ನು ಪುನರ್ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದರೂ ವಿ.ಮಂಜುಳಾ ಅವರು ಬಿಆರ್ಟಿಎಸ್ ಆಸ್ತಿ ಮುಟ್ಟಬೇಡಿ ಎನ್ನುತ್ತಿದ್ದಾರೆ. ಸಾರ್ವಜನಿಕರಿಗೆ ಸಹಾಯವಾಗಬಲ್ಲ ಕಾಮಗಾರಿಗೆ ಸರ್ಕಾರದ ಅಧಿಕಾರಿಗಳೇ ಅಡೆತಡೆ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.