ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ, ‘ಕೋಳಿ ಸಾಕಣೆಯನ್ನು ಕೃಷಿಯನ್ನಾಗಿ ಪರಿಗಣಿಸಿ, ಸರ್ಕಾರದ ಸೌಲಭ್ಯಗಳು ದೊರೆಯಲು ರೈತರಿಗೆ ಅನುಕೂಲವಾಗುವ ಕರಡು ಸಿದ್ಧಪಡಿಸಲು ಪಶು, ಕಂದಾಯ, ಇಂಧನ, ಪಂಚಾಯತ್ ರಾಜ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿ ರಚಿಸಲಾಗಿದೆ’ ಎಂದರು.