‘ದೇವಾಲಯಗಳ ನಿರ್ವಹಣೆಗೆಇಲಾಖೆಯಿಂದ ನೀಡುವ ತಸ್ತಿಕ್ ಮಾದರಿಯ ಹಣ ಹೊರತುಪಡಿಸಿ, ಬೇರೆ ಆದಾಯ ಇಲ್ಲ.ತಸ್ತಿಕ್ ಅನುದಾನವು ಪೂಜಾ ಸಾಮಗ್ರಿಗೆ ಮಾತ್ರ ಸಾಕಾಗುತ್ತಿದ್ದು, ಅರ್ಚಕರಿಗೆ ಯಾವುದೇ ರೀತಿಯ ವೇತನ ಸಿಗುತ್ತಿಲ್ಲ. ಇವರಿಗೆ ಮಾಸಿಕ ಗೌರವಧನ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಅರ್ಚಕರ ಭವನ ಸ್ಥಾಪಿಸಬೇಕು. ಮುಜರಾಯಿ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಅನುದಾನವನ್ನು ಬಜೆಟ್ನಲ್ಲಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.