‘1994ರಲ್ಲಿ ನಮ್ಮ ಆಸ್ಪತ್ರೆಯ ನೇತ್ರದ ಬ್ಯಾಂಕ್ ಉದ್ಘಾಟಿಸಿದ ರಾಜ್ಕುಮಾರ್ ಅವರು, ಕುಟುಂಬದ ಎಲ್ಲ ಸದಸ್ಯರು ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಕೈಗೊಂಡಿದ್ದರು. ಅದರಂತೆ ಅವರ ಹಾಗೂ ಪಾರ್ವತಮ್ಮ ಅವರ ಕಣ್ಣುಗಳನ್ನು ದಾನವಾಗಿ ಪಡೆಯಲಾಗಿತ್ತು. ಪುನೀತ್ ಅವರ ಸಾವಿನ ಆಘಾತದ ನಡುವೆಯೂ ಕುಟುಂಬದವರು ನೇತ್ರದಾನ ಮರೆಯಲಿಲ್ಲ. ತಂದೆಯ ವಚನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಪುನೀತ್, ಯುವಜನರಿಗೆ ಮಾದರಿಯಾಗಿದ್ದಾರೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ತಿಳಿಸಿದರು.