ಬೆಂಗಳೂರು: 2022–23 ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದ್ದ ಕೃಷಿ ಯಾಂತ್ರೀಕರಣದಡಿ ಡೀಸೆಲ್ಗೆ ಸಹಾಯಧನ ನೀಡುವ ‘ರೈತ ಶಕ್ತಿ’ ಯೋಜನೆಯನ್ನು ಸದ್ಯವೇ ಜಾರಿಗೊಳಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ಈ ಯೋಜನೆಯಡಿ ರೈತರಿಗೆ ಒಂದು ಎಕರೆಗೆ ₹250 ರಂತೆ ಗರಿಷ್ಠ ಐದು ಎಕರೆಗೆ ಒಟ್ಟು ₹1,250 ಡಿಬಿಟಿ ಮೂಲಕ ಸಹಾಯಧನ ಪಾವತಿಸಲಾಗುವುದು. ಇದರಿಂದ ಕೃಷಿ ಉಪಕರಣಗಳ ಮೂಲಕ ಆಹಾರ ಧಾನ್ಯಗಳ ಉತ್ಪಾದಕತೆಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದಕ್ಕಾಗಿ ರೈತರು ನೋಂದಣಿಗಾಗಿ ಇರುವ ( FRUITS) ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಬೇಕು. ಕಿಸಾನ್ ತಂತ್ರಾಂಶದ ಮೂಲಕ ಹಣವನ್ನು ರೈತರ ಸೀಡೆಡ್ ಬ್ಯಾಂಕ್ ಅಥವಾ ಅಂಚೆ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗುವುದು. ಈ ಯೋಜನೆಗೆ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯ ಇಲ್ಲ ಎಂದು ಅವರು ಹೇಳಿದ್ದಾರೆ.