ಬೆಂಗಳೂರು: 'ದೇಶದ ಭೌಗೊಳಿಕ ಸಮಗ್ರತೆ ಕಾಪಾಡಲು ಭಾರತ ಸಮರ್ಥವಾಗಿದೆ. ವಿರೋಧಿ ದೇಶಗಳ ಕುತಂತ್ರ ಮಟ್ಟ ಹಾಕುತ್ತೇವೆ. ಏರೊ ಇಂಡಿಯಾ ಈ ಬದ್ಧತೆಯನ್ನು ಜಾಹೀರುಪಡಿಸಲಿದೆ' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸ್ಪಷ್ಟ ಸಂದೇಶ ನೀಡಿದರು.
ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಏರೋ ಇಂಡಿಯಾ 21 ಭಾರತದ ಅಪಾರ ಸಾಮರ್ಥ್ಯವನ್ನು ಮತ್ತು ರಕ್ಷಣಾ, ವಾಯುಯಾನ ಕ್ಷೇತ್ರದಲ್ಲಿ ನಮ್ಮ ದೇಶ ನೀಡುವ ಬಹುಮುಖಿ ಅವಕಾಶಗಳನ್ನು ಪ್ರದರ್ಶಿಸುತ್ತದೆ. ಇದು ವಿಶ್ವದ ಮೊದಲ ಹೈಬ್ರಿಡ್ ಏರೋ ಮತ್ತು ರಕ್ಷಣಾ ಪ್ರದರ್ಶನವಾಗಿ ಭರವಸೆ ಮೂಡಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
#WATCH | Helicopters and aircraft part of Surya Kiran and Sarang display teams create heart in the sky at Aero India show in Bengaluru. pic.twitter.com/pKMWh2JVxC
— ANI (@ANI) February 3, 2021
ಜಾಗತಿಕವಾಗಿ ಸಾಂಕ್ರಾಮಿಕ ರೋಗದಿಂದ ಉಂಟಾದ ನಿರ್ಬಂಧಗಳ ಹೊರತಾಗಿಯೂ, ಈ ವರ್ಷದ ಕಾರ್ಯಕ್ರಮದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವವರನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
I have been informed that about 540 exhibitors including 80 foreign companies, Defence Ministers, Delegates, Service chiefs & officials from more than 55 nations are participating in this event. It reflects growing optimism of the global community: Defence Minister Rajnath Singh pic.twitter.com/XuprGj00nD
— ANI (@ANI) February 3, 2021
ಈ ಕಾರ್ಯಕ್ರಮದಲ್ಲಿ 80 ವಿದೇಶಿ ಕಂಪನಿಗಳು, ರಕ್ಷಣಾ ಮಂತ್ರಿಗಳು, ಪ್ರತಿನಿಧಿಗಳು, ಸೇವಾ ಮುಖ್ಯಸ್ಥರು ಮತ್ತು 55ಕ್ಕೂ ಹೆಚ್ಚು ರಾಷ್ಟ್ರಗಳ ಅಧಿಕಾರಿಗಳು ಸೇರಿದಂತೆ ಸುಮಾರು 540 ಪ್ರದರ್ಶಕರು ಭಾಗವಹಿಸುತ್ತಿದ್ದಾರೆ ಎಂದು ನನಗೆ ಮಾಹಿತಿ ನೀಡಲಾಗಿದೆ. ಇದು ಜಾಗತಿಕ ಸಮುದಾಯದಲ್ಲಿ ಬೆಳೆಯುತ್ತಿರುವ ಆಶಾವಾದವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ನಮ್ಮ ಭದ್ರತಾ ವಿಭಾಗವನ್ನು ಬಲಪಡಿಸಲು ನಾವು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದೊಡ್ಡ ಮತ್ತು ಸಂಕೀರ್ಣ ರಕ್ಷಣಾ ವೇದಿಕೆಗಳ ದೇಶೀಯ ಉತ್ಪಾದನೆಯು ಈಗ 'ಆತ್ಮನಿರ್ಭರ ಭಾರತ್ ಅಭಿಯಾನ್' ಅಡಿಯಲ್ಲಿ ನಮ್ಮ ನೀತಿಯ ಕೇಂದ್ರಬಿಂದುವಾಗಿದೆ. ಮುಂದಿನ 7-8 ವರ್ಷಗಳಲ್ಲಿ ಮಿಲಿಟರಿ ಆಧುನೀಕರಣಕ್ಕಾಗಿ 130 ಬಿಲಿಯನ್ ಡಾಲರ್ ಖರ್ಚು ಮಾಡಲು ನಾವು ಯೋಜಿಸಿದ್ದೇವೆ ಎಂದರು.
ಈ ಪ್ರದರ್ಶನಕ್ಕೆ ಖುದ್ದಾಗಿ ಸೇರಿಕೊಂಡ ಮಾಲ್ಡೀವ್ಸ್, ಉಕ್ರೇನ್, ಈಕ್ವಟೋರಿಯಲ್ ಗಿನಿಯಾ, ಇರಾನ್, ಕೊಮರೊಸ್ ಮತ್ತು ಮಡಗಾಸ್ಕರ್ನ ರಕ್ಷಣಾ ಮಂತ್ರಿಗಳಿಗೆ ಮತ್ತು ಸೇರ್ಪಡೆಯಾಗುತ್ತಿರುವ ಇನ್ನೂ ಅನೇಕರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಭಾರತ ಸರ್ಕಾರವು ರಕ್ಷಣಾ ಕ್ಷೇತ್ರದಲ್ಲಿ ಎಫ್ಡಿಐ ಅನ್ನು ಸ್ವಯಂಚಾಲಿತ ಮಾರ್ಗದ ಮೂಲಕ ಶೇ 74 ಮತ್ತು ಸರ್ಕಾರಿ ಮಾರ್ಗದ ಮೂಲಕ ಶೇ 100 ರಷ್ಟರವರೆಗೆ ಹೆಚ್ಚಿಸಿದೆ. ಇದು ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಹಲವಾರು ಪ್ರಯತ್ನಗಳ ಹೊರತಾಗಿಯೂ ಗಡಿಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಬಲವನ್ನು ಬಳಸಿಕೊಳ್ಳುವ ದುರದೃಷ್ಟಕರ ಪ್ರಯತ್ನಗಳಿಗೆ ನಾವು ದೀರ್ಘಕಾಲದಿಂದ ಸಾಕ್ಷಿಯಾಗಿದ್ದೇವೆ. ಭಾರತವು ಜಾಗರೂಕವಾಗಿದೆ ಹಾಗೂ ನಮ್ಮ ಜನರನ್ನು ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಯಾವುದೇ ದುಷ್ಕೃತ್ಯವನ್ನು ಹಿಮ್ಮೆಟ್ಟಿಸುವ ಮತ್ತು ಸೋಲಿಸಲು ಸಿದ್ಧವಾಗಿದೆ. ಇದರೊಂದಿಗೆ ಭಾರತವು ಅನೇಕ ರಂಗಗಳಿಂದ ಹೊರಹೊಮ್ಮುವ ಬೆದರಿಕೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಭಾರತವು ಪ್ರಾಯೋಜಿತ ಉಗ್ರ ಭಯೋತ್ಪಾದನೆಗೆ ಬಲಿಯಾಗಿದೆ. ಇದು ಈಗ ಜಾಗತಿಕ ಸವಾಲಾಗಿ ಪರಿಣಮಿಸಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.