ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಆರ್.ಪಾಟೀಲ ಮಾತನಾಡಿ, ‘ಕೃಷ್ಣ ಪೌರಾಣಿಕ ವ್ಯಕ್ತಿ, ಶಿವ ಚಾರಿತ್ರಿಕ ವ್ಯಕ್ತಿ. ಶಿವ ಸಂಸ್ಕೃತಿಯ ಆರಾಧಕರಾದ ಲಿಂಗಾಯತರಿಗೆ ರಾಮಮಂದಿರದ ಅಗತ್ಯ ಏಕೆ? ರಾಮ ಮಂದಿರ ಕಟ್ಟುತ್ತೇವೆ ಎಂದು ಧರ್ಮದ ಹೆಸರಿನಲ್ಲಿ ದೇಶೀಯ ಸಂಸ್ಕೃತಿ, ಪರಂಪರೆ ಒಡೆಯುವ ಕಾರ್ಯಕ್ಕೆ ಮೂಲಭೂತವಾದಿಗಳು ಕೈಹಾಕಿದ್ದಾರೆ. ಶಿವ ಪರಂಪರೆಯ ಆರಾಧಕರಾದ ಲಿಂಗಾಯತರು ರಾಮಮಂದಿರ ನಿರ್ಮಾಣಕ್ಕೆ ಚಂದಾ ಕೊಡಬಾರದು. ಶಿವಸಂಸ್ಕೃತಿಯ ಉಳಿವಿಗಾಗಿ ಶಿವನಮೂರ್ತಿ ನಿರ್ಮಿಸುವ ಕಾರ್ಯ ಮಾಡಬೇಕು’ ಎಂದರು.