ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಪ್ರಕರಣ: ವಸಂತನಗರದ ನ್ಯಾಯಾಲಯದಲ್ಲಿ ಯುವತಿ ಹೇಳಿಕೆ ಸಂಗ್ರಹ

Last Updated 30 ಮಾರ್ಚ್ 2021, 10:18 IST
ಅಕ್ಷರ ಗಾತ್ರ

ಬೆಂಗಳೂರು: ಸಿ.ಡಿ. ಪ್ರಕರಣದ ಸಂತ್ರಸ್ತೆಯಾದ ಯುವತಿ, ವಸಂತನಗರದ ಗುರುನಾನಕ್‌ ಭವನ ಬಳಿಯ ನ್ಯಾಯಾಲಯಕ್ಕೆ‌ ಹಾಜರಾಗಿದ್ದಾರೆ.

ಭದ್ರತೆ ಕಾರಣಕ್ಕಾಗಿ‌ ಮೊದಲೇ ಯೋಚಿಸಿ, ಮಾಹಿತಿಯನ್ನು ಗೌಪ್ಯವಾಗಿರಿಸಿ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬದಲು ವಸಂತನಗರದ ನ್ಯಾಯಾಲಯಕ್ಕೆ ಯುವತಿಯನ್ನು ಕರೆಸಲಾಗಿದೆ.

ಕೊರೊನಾ ಸೋಂಕು ಹರಡುವಿಕೆ‌ ಹಿನ್ನೆಲೆಯಲ್ಲಿ ಗುರುನಾನಕ್ ಭವನ ಬಳಿ ವಿಶೇಷ ನ್ಯಾಯಾಲಯ ತೆರೆಯಲಾಗಿತ್ತು. ಅಲ್ಲಿಯೇ ಇದೀಗ ಯುವತಿಯಿಂದ ಹೇಳಿಕೆ ಪಡೆಯಲಾಗುತ್ತಿದೆ.

ಇದೊಂದು ಗಂಭೀರ‌ ಪ್ರಕರಣವೆಂದು ಪರಿಗಣಿಸಿದ ನ್ಯಾಯಾಧೀಶರು, ಸ್ವತ ಕಾರಿನಲ್ಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ವಸಂತನಗರದ ನ್ಯಾಯಾಲಯಕ್ಕೆ ಹೋಗಿದ್ದಾರೆ.

ನ್ಯಾಯಾಧೀಶರು ಹೋಗುವ ಮುನ್ನವೇ ಯುವತಿ ಹಾಜರಾಗಿದ್ದರು. ಇದೀಗ ಯುವತಿಯಿಂದ ಹೇಳಿಕೆ ಪ್ರಕ್ರಿಯೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT