‘ಕಮಾಂಡರ್ ಆಗಿ ತಂಡ ಮುನ್ನಡೆಸಬೇಕು ಎಂಬುದು ಮಗಳ ಕನಸಾಗಿತ್ತು. ಆ ಗೌರವ ಒಲಿದಿದ್ದು, ಸತತ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸಿರುವ ಮಗಳಿಗೆ ಶಹಬ್ಬಾಸ್ ಹೇಳಬೇಕು. ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ಕೆಡೆಟ್ಗಳ ತಂಡದ ನಾಯಕಿಯಾಗಿ ಕರ್ನಾಟಕ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಪ್ರತಾಪ್ ಸಿಂಗ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.